ಬೆಂಗಳೂರು: ಶ್ರೇಯಾಂಕ ರಹಿತ ಆಟಗಾರ ಅನೂಪ್ ಕೇಶವಮೂರ್ತಿ ಇಲ್ಲಿ ನಡೆಯುತ್ತಿರುವ ಎಐಟಿಎ ವತಿಯ 12 ವರ್ಷದೊಳಗಿನವರ ಚಾಂಪಿಯನ್ಷಿಪ್ ಸೀರಿಸ್ ಟೆನಿಸ್ ಟೂರ್ನಿಯಲ್ಲಿ ಮಂಗಳವಾರ ಕ್ವಾರ್ಟರ್ಫೈನಲ್ ತಲುಪಿದ್ದಾರೆ.
ಬಾಲಕರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಅನೂಪ್ 7–6, 7–5ರಲ್ಲಿ ಅರ್ಣವ್ ವಿಜಯ್ ವಿರುದ್ಧ ಗೆದ್ದರು.
ಕೇಶವ್ ಗೋಯಲ್ 6–4, 6–1ರಲ್ಲಿ ಗವಿನ್ ವಿರುದ್ಧ ಜಯಗಳಿಸಿ ಎಂಟರ ಘಟ್ಟ ತಲುಪಿದರು. ಕರ್ನಾಟಕದ ಮೂರನೇ ಶ್ರೇಯಾಂಕದ ಆಟಗಾರ ಮುಸ್ತಫಾ ರಾಜ 6–0, 6–0ರಲ್ಲಿ ಕೃಷ್ಣ ತ್ಯಾಗಿ ಎದುರು ಗೆದ್ದರು.
ಇತರ ಪಂದ್ಯಗಳಲ್ಲಿ ರಿಷಿ 6–1, 6–1ರಲ್ಲಿ ಪ್ರೇಮಕುಮಾರ್ ಮೇಲೂ, ಭುವನ್ 6–3, 6–2ರಲ್ಲಿ ಶ್ರವಣ್ ವಿರುದ್ಧವೂ, ಅನುಷ್ 7–5, 6–4ರಲ್ಲಿ ಕುಶಾಲ್ ಎದುರೂ, ಜಾಸನ್ ಎಮ್. ಡೇವಿಡ್ 6–4, 6–1ರಲ್ಲಿ ಮಿಸಾನ್ ಮೇಲೂ ಜಯಗಳಿಸಿದರು.
ರಾಜ್ಯದ ಸೋಹಾಗೆ ಜಯ: ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಕರ್ನಾಟಕದ ಆಟಗಾರ್ತಿ ಸೋಹಾ ಸಿಂಗ್ 6–1, 6–0ರಲ್ಲಿ ಹರಿತಶ್ರೀ ಎದುರು ಗೆದ್ದು ಕ್ವಾರ್ಟರ್ಫೈನಲ್ಗೆ ಲಗ್ಗೆಯಿಟ್ಟರು.
ಇತರ ಪಂದ್ಯಗಳಲ್ಲಿ ಕೌಶಿಕೀ 6–4, 1–6, 6–3ರಲ್ಲಿ ದಿಶಾ ಸಂತೋಷ್ ಎದುರೂ, ಆದಿತಿ 6–1, 6–0ರಲ್ಲಿ ಜನ್ಯಾ ಮೇಲೂ, ವನ್ಯಾ 6–2, 6–1ರಲ್ಲಿ ಸಿರಿ ಎಮ್. ಪಾಟಿಲ್ ವಿರುದ್ಧವೂ, ಸಿಂಜನಿ ಮಿಥುನ್ 6–4, 6–1ರಲ್ಲಿ ಶ್ರೀನಿಧಿ ಬಾಲಾಜಿ ಎದುರೂ, ಚಾರ್ಮಿ 6–1, 6–2ರಲ್ಲಿ ದಿಶಾ ಮೇಲೂ, ಸ್ಮೃತಿ 7–6, 6–2ರಲ್ಲಿ ಅಂಜನಾ ಎದುರೂ, ಹರ್ಷಿಣಿ 7–5, 6–3ರಲ್ಲಿ ಅನುಷ್ಕಾ ವಿರುದ್ಧವೂ ಜಯದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.