ADVERTISEMENT

ಧರ್ಮಶಾಲಾ ಮೈದಾನದಲ್ಲಿ ಭಾರತ ತಂಡಕ್ಕೆ ಆತಂಕ ಎದುರಾಗಲಿದೆ: ಮಿಚೆಲ್‌ ಜಾನ್ಸನ್‌

ಪಿಟಿಐ
Published 22 ಮಾರ್ಚ್ 2017, 11:20 IST
Last Updated 22 ಮಾರ್ಚ್ 2017, 11:20 IST
ಮಿಚೆಲ್‌ ಜಾನ್ಸನ್‌
ಮಿಚೆಲ್‌ ಜಾನ್ಸನ್‌   

ನವದೆಹಲಿ: ‘ಬಾರ್ಡರ್‌–ಗಾವಸ್ಕರ್‌’ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್‌ ಪಂದ್ಯ ಧರ್ಮಶಾಲಾ ಮೈದಾನದಲ್ಲಿ ಮಾರ್ಚ್‌ 25ರಿಂದ ಆರಂಭವಾಗಲಿದ್ದು, ಪಂದ್ಯದಲ್ಲಿ ಭಾರತವನ್ನು ಒತ್ತಡಕ್ಕೆ ಸಿಲುಕಿಸುವ ಮೂಲಕ ನಾವು ಗೆಲುವು ಸಾಧಿಸಲಿದ್ದೇವೆ ಎಂದು ಆಸೀಸ್‌ ವೇಗಿ ಮಿಚೆಲ್‌ ಜಾನ್ಸನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಧರ್ಮಶಾಲಾ ಮೈದಾನ ಅತ್ಯುತ್ತಮವಾಗಿದೆ. ನಮ್ಮ ತಂಡ ಸವಾಲು ಎದುರಿಸಲು ಸಿದ್ಧವಾಗಿದ್ದು, ಭಾರತ ತಂಡಕ್ಕೆ ಆತಂಕ ಎದುರಾಗಲಿದೆ. ಸ್ಪಿನರ್‌ಗಳಿಗೆ ಕೆಲ ಕ್ರೀಡಾಂಗಣಗಳು ಪೂರಕ ಹಾಗೂ ಉಳಿದವು  ಮಾರಕವಾಗಿವೆ ಎಂದಿದ್ದಾರೆ.

ರಾಂಚಿಯಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ  ಉತ್ತಮ ಆಟವಾಡಿದ ಪೀಟರ್ ಹ್ಯಾಂಡ್ಸ್‌ಕಂಬ್ ಮತ್ತು ಶಾನ್ ಮಾರ್ಷ್ ಅವರು ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡಿದರು ಎಂದರು.

'ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿರುವ ಜಾನ್ಸನ್‌ ಈವರೆಗೆ 73 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.