ADVERTISEMENT

ಮುಂಬೈ ಪೊಲೀಸರ ವಶಕ್ಕೆ ಮೇಯಪ್ಪನ್

ಬುಕ್ಕಿಗಳೊಂದಿಗೆ ಒಳಸಂಚು ಆರೋಪ

​ಪ್ರಜಾವಾಣಿ ವಾರ್ತೆ
Published 25 ಮೇ 2013, 11:30 IST
Last Updated 25 ಮೇ 2013, 11:30 IST

ಮುಂಬೈ (ಪಿಟಿಐ) : ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧಿತ ಸಿಎಸ್‌ಕೆ ಮಾಲೀಕ ಗುರುನಾಥ್ ಮೇಯಪ್ಪನ್ ಅವರನ್ನು ಮೇ 29ರ ವರೆಗೆ ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸಿ ಮೆಟ್ರೋಪಾಲಿಟನ್ ನ್ಯಾಯಾಲಯವು ಶನಿವಾರ ಆದೇಶಿಸಿದೆ.

ಮೇಯಪ್ಪನ್ ಅವರು ಐಪಿಎಲ್ ಪಂದ್ಯಗಳ ಮೇಲೆ ಹೆಚ್ಚಿನ ಬೆಟ್ಟಿಂಗ್ ಮತ್ತು ತಂಡದ ತಂತ್ರಗಳನ್ನು ಬುಕ್ಕಿಗಳಿಗೆ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ಪೊಲೀಸರು ತಿಳಿಸಿದರು.

ಹಗರಣ ಸಂಬಂಧ ಮೇಯಪ್ಪನ್ ಮತ್ತು ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪ ಹೊತ್ತಿರುವ ಪಾಕಿಸ್ತಾನದ ವಿವಾದಾತ್ಮಕ ಅಂಪೈರ್ ಅಸ್ಸಾದ್ ರೌಫ್ ಅವರ ನಡುವಿನ ಸಂಬಂಧದ ಬಗ್ಗೆ ವಿಚಾರಣೆ ನಡೆಸುವ ಸಲುವಾಗಿ ಮೇಯಪ್ಪನ್ ಅವರನ್ನು ವಶಕ್ಕೆ ನೀಡುವಂತೆ ಕೋರಿ ಕ್ರೈಂ ಬ್ರಾಂಚ್ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನು ಮಾನ್ಯಮಾಡಿದ ನ್ಯಾಯಾಲಯವು ಮೇಯಪ್ಪನ್ ಅವರನ್ನು ಕ್ರೈಂ ಬ್ರಾಂಚ್ ವಶಕ್ಕೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.