ADVERTISEMENT

ಯುವರಾಜ್, ವಾರ್ನರ್ ಫಿಟ್; ಮೂಡಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಯುವರಾಜ್‌ ಸಿಂಗ್‌ (ಎಡ) ಮತ್ತು ವಿವಿಎಸ್‌ ಲಕ್ಷ್ಮಣ್‌ ಸಮಾಲೋಚನೆ.
ಯುವರಾಜ್‌ ಸಿಂಗ್‌ (ಎಡ) ಮತ್ತು ವಿವಿಎಸ್‌ ಲಕ್ಷ್ಮಣ್‌ ಸಮಾಲೋಚನೆ.   

ಬೆಂಗಳೂರು: ಯುವರಾಜ್ ಸಿಂಗ್ ಮತ್ತು ಡೇವಿಡ್ ವಾರ್ನರ್ ಅವರು ಬೆಂಗಳೂರು ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ. ಅವರು ಬಳಲಿಕೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಸನ್‌ರೈಸರ್ಸ್ ತಂಡದ ಮುಖ್ಯ ಕೋಚ್ ಟಾಮ್ ಮೂಡಿ ಹೇಳಿದ್ದಾರೆ.

‘ಆರ್‌ಸಿಬಿ ಎದುರು ಈ ಹಿಂದೆ ನಾವು ಸತತ ಎರಡು ಗೆಲುವು ಸಾಧಿಸಿದ್ದೇವೆ. ಆದರೆ ಪ್ರತಿಯೊಂದು ಪಂದ್ಯವು ಹೊಸತು. ಆದ್ದರಿಂದ ಯಾವುದೆ ಹಂತದಲ್ಲಿಯೂ ಉತ್ತಮವಾಗಿಯೇ ಆಡುತ್ತೇವೆ.

ಕೋಲ್ಕತ್ತದಲ್ಲಿ ಆರ್‌ಸಿಬಿ ತಂಡವು 49ಕ್ಕೆ ಆಲೌಟ್ ಆಗಿತ್ತು. ಆದರೆ ಮತ್ತೊಮ್ಮೆ ತಪ್ಪು ಮಾಡುವ ತಂಡ ಅದಲ್ಲ. ಅದು ಇನ್ನಷ್ಟು  ಅಪಾಯಕಾರಿ ಯಾಗಿ ತಿರುಗೇಟು ನೀಡುವ ಸಾಮರ್ಥಯ ಹೊಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.