ADVERTISEMENT

ವೇಡ್ ಮತ್ತು ಜಡೇಜ ಸಂಭಾಷಣೆ: ಸ್ಮಿತ್ ಬೇಸರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 19:30 IST
Last Updated 28 ಮಾರ್ಚ್ 2017, 19:30 IST
ಸ್ಟೀವನ್‌ ಸ್ಮಿತ್‌
ಸ್ಟೀವನ್‌ ಸ್ಮಿತ್‌   

ಧರ್ಮಶಾಲಾ: ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಕೆಟ್‌ ಕೀಪರ್ ಮ್ಯಾಥ್ಯೂ ವೇಡ್ ಮತ್ತು ಭಾರತದ ಆಟಗಾರ ರವೀಂದ್ರ ಜಡೇಜ ನಡುವಣದ ಮಾತಿನ ಚಕಮಕಿಯ ದೃಶ್ಯತುಣುಕನ್ನು ವೆಬ್‌ಸೈಟ್‌ಗೆ ಹಾಕಿರುವ ಬಿಸಿಸಿಐ ಕ್ರಮ ಸರಿಯಲ್ಲ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಇಡೀ ಸರಣಿಯಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ಆದರೆ, ವೇಡ್ ಮತ್ತು ಜಡೇಜ ಸಂಭಾಷಣೆಯನ್ನು ವೆಬ್‌ಸೈಟ್‌ಗೆ ಹಾಕಿರುವುದು ಸರಿಯಲ್ಲ. ಅದರಿಂದ ನನಗೆ ಬೇಸರವಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT