ದೋಹಾ : 23 ವರ್ಷದೊಳಗಿನವರ ಎಎಫ್ಸಿ ಕಪ್ ಅರ್ಹತಾ ಸುತ್ತಿನ ಪಂದ್ಯಗಳು ಬುಧವಾರ ಇಲ್ಲಿ ಆರಂಭವಾಗಲಿವೆ. ಭಾರತ ತಂಡದವರು ಮೊದಲ ಪಂದ್ಯದಲ್ಲಿ ಸಿರಿಯಾ ವಿರುದ್ಧ ಸೆಣಸಲಿದ್ದಾರೆ.
ನವದೆಹಲಿಯಲ್ಲಿ ಎರಡು ವಾರಗಳ ಶಿಬಿರದಲ್ಲಿ ಪಾಲ್ಗೊಂಡಿದ್ದ ಭಾರತ ತಂಡದವರು ಸಿಂಗಪುರ ವಿರುದ್ಧ ಎರಡು ಸೌಹಾರ್ದ ಪಂದ್ಯಗಳನ್ನು ಆಡಿದ್ದರು.
ಕಳೆದ ಬಾರಿ 23 ವರ್ಷದೊಳಗಿನವರ ಎಎಫ್ಸಿ ಕಪ್ನಲ್ಲಿ ಸಿರಿಯಾ ಉತ್ತಮ ಆಟ ಆಡಲಿಲ್ಲ. ಹೀಗಾಗಿ ಈ ಬಾರಿ ಲಯಕ್ಕೆ ಮರಳಲು ಪ್ರಯತ್ನಿಸಲಿದೆ. ತಂಡದ ಕೋಚ್ ಕೂಡ ಇದನ್ನು ಒಪ್ಪಿಕೊಂಡಿದ್ದು ‘ಈ ಟೂರ್ನಿ ನಮ್ಮ ತಂಡಕ್ಕೆ ಅತ್ಯಂತ ಮಹತ್ವದ್ದು’ ಎಂದು ಹೇಳಿದ್ದಾರೆ.
ಭಾರತ ತಂಡದ ಕೋಚ್ ಸ್ಟೀಫನ್ ಕಾನ್ಸ್ಟಂಟೈನ್ ಮಾತನಾಡಿ ತಂಡದ ಬೆಳವಣಿಗೆಗೆ ದೀರ್ಘಕಾಲದ ಯೋಜನೆಗಳನ್ನು ಹಾಕಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.