ADVERTISEMENT

ವೆಂಕಟೇಶ್ ಪ್ರಸಾದ್‌ ಜನ್ಮದಿನಕ್ಕೆ ಬಿಸಿಸಿಐ ವಿಶೇಷ ಸಂದೇಶ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 18:02 IST
Last Updated 5 ಆಗಸ್ಟ್ 2018, 18:02 IST
ವೆಂಕಟೇಶ್ ಪ್ರಸಾದ್‌
ವೆಂಕಟೇಶ್ ಪ್ರಸಾದ್‌   

ಮುಂಬೈ: ಹಿರಿಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್‌ಗೆ ಭಾನು ವಾರ ತಮ್ಮ 49ನೇ ಜನ್ಮದಿನ ಆಚರಿಸಿಕೊಂಡರು. ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ವಿಶಿಷ್ಟ ರೀತಿಯಲ್ಲಿ ಶುಭಾಶಯ ಕೋರಿದೆ.

ಬೆಂಗಳೂರಿನಲ್ಲಿ ನಡೆದಿದ್ದ 1996ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ವೆಂಕಟೇಶ್ ಪ್ರಸಾದ್ ಮತ್ತು ಪಾಕಿಸ್ತಾನದ ಬ್ಯಾಟ್ಸ್‌ಮನ್ ಅಮೀರ್ ಸೊಹೇಲ್ ಅವರ ನಡುವಿನ ಜಟಾಪಟಿಯ ವಿಡಿಯೊ ತುಣುಕನ್ನು ಟ್ವಿಟರ್‌ಗೆ ಹಾಕಿರುವ ಬಿಸಿಸಿಐ, ‘ಈ ಘಟನೆಯು ಕ್ರಿಕೆಟ್‌ ಅಭಿಮಾನಿಗಳ ಮನಸ್ಸಿನಿಂದ ಮಾಸಲು ಸಾಧ್ಯವೇ ಇಲ್ಲ. ಇದನ್ನು ನೆನಪಿಸಿಕೊಳ್ಳಲು ಇವತ್ತು ಸೂಕ್ತ ಸಮಯ’ ಎಂದು ಬರೆದಿದೆ.

‘ನಿಧಾನಗತಿಯ ಎಸೆತಗಳನ್ನು ಕರಾರುವಕ್ಕಾಗಿ ಪ್ರಯೋಗಿಸಿ ಬ್ಯಾಟ್ಸ್‌ಮನ್‌ಗಳಿಗೆ ಆಘಾತ ನೀಡುತ್ತಿದ್ದ ನಿಸ್ಸೀಮ್ ವೆಂಕಟೇಶ್ ಪ್ರಸಾದ್‌ಗೆ ಶುಭಾಶಯಗಳು’ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.