ADVERTISEMENT

ಎಚ್‌.ವಿಶ್ವನಾಥ್‌– ವಿಜಯ್‌ ರಹಸ್ಯ ಮಾತುಕತೆ; ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 4:54 IST
Last Updated 12 ಸೆಪ್ಟೆಂಬರ್ 2021, 4:54 IST
ಹರದನಹಳ್ಳಿ ವಿಜಯ್ ಜತೆ ಅಡಗೂರು ಎಚ್.ವಿಶ್ವನಾಥ್‌ ಮಾತುಕತೆ ನಡೆಸಿದರು
ಹರದನಹಳ್ಳಿ ವಿಜಯ್ ಜತೆ ಅಡಗೂರು ಎಚ್.ವಿಶ್ವನಾಥ್‌ ಮಾತುಕತೆ ನಡೆಸಿದರು   

ಸಾಲಿಗ್ರಾಮ: ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಅವರು ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯ್‌ ಅವರನ್ನು ಶುಕ್ರವಾರ ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದು, ತಾಲ್ಲೂಕಿನ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ವಿಶ್ವನಾಥ್‌ ಅವರು ಹಬ್ಬದ ದಿನವೇ ವಿಜಯ್‌ ಅವರ ತೋಟದ ಮನೆಯಲ್ಲಿ 3 ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ.

ಜೆಡಿಎಸ್‌ನಲ್ಲಿದ್ದ ವಿಜಯ್‌, ಮಿರ್ಲೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ನಂತರ ಮುಡಾ ಅಧ್ಯಕ್ಷರಾಗಿದ್ದರು. ಶಾಸಕ ಸಾ.ರಾ.ಮಹೇಶ್ ಬಣದಿಂದ ದೂರ ಉಳಿದು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಬಣದಲ್ಲಿ ಗುರುತಿಸಿಕೊಂಡಿದ್ದರು.

ಸ್ವಂತ ಹಣದಲ್ಲಿ ಸಾ.ರಾ ಮಹೇಶ್‌ ಕೋವಿಡ್ ಆಸ್ಪತ್ರೆ ತೆರೆದಾಗ, ಭಿನ್ನಾಭಿಪ್ರಾಯ ಮರೆತು ವಿಶ್ವನಾಥ್‌ ಶ್ಲಾಘಿಸಿದ್ದರು. ಆದರೆ ಈಗ ಮಹೇಶ್ ಅವರಿಂದ ದೂರ ಉಳಿದಿರುವ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿರುವುದು ಅಚ್ಚರಿ ಮೂಡಿಸಿದೆ.

ADVERTISEMENT

‘ಜಪದಕಟ್ಟೆಗೆ ಹೋಗಿ ವಾಪಸ್‌ ಬರುವಾಗ ವಿಜಯ್‌ ಮನೆಗೆ ಹೋಗಿ ಹಬ್ಬದ ಶುಭಾಶಯ ತಿಳಿಸಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ’ ಎಂದು ವಿಶ್ವನಾಥ್ ಪ್ರತಿಕ್ರಿಯಿಸಿದರು. ‘ವಿಶ್ವನಾಥ್ ಅವರು ನಮ್ಮ ಮನೆಗೆ ಬಂದು ಯೋಗಕ್ಷೇಮ ವಿಚಾರಿಸಿದರು ಅಷ್ಟೇ’ ಎಂದು ವಿಜಯ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.