ADVERTISEMENT

ಶಾಲಾ ಹಂತದಲ್ಲಿ ಹೊಸ ನೀತಿ ಅನುಷ್ಠಾನ ಸಾಧ್ಯವೇ?

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 19:30 IST
Last Updated 6 ಸೆಪ್ಟೆಂಬರ್ 2021, 19:30 IST

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಶಿಕ್ಷಣದಲ್ಲಿ ಅಳವಡಿಸುವ ಇಂಗಿತವನ್ನು ಶಿಕ್ಷಣ ಸಚಿವರು ವ್ಯಕ್ತಪಡಿಸಿರುವುದು ಸ್ವಾಗತಾರ್ಹ. ಆದರೆ, ಬಾಲ್ಯಪೂರ್ವ ಕಾಳಜಿ ಮತ್ತು ಶಿಕ್ಷಣ, ಬುನಾದಿ ಶಿಕ್ಷಣ ಹಂತವನ್ನು ಯಾವ ರೀತಿ ಅನುಷ್ಠಾನಗೊಳಿಸುತ್ತಾರೆ ಎಂಬುದರ ಆಧಾರದ ಮೇಲೆ ಈ ನೀತಿಯ ಭವಿಷ್ಯ ನಿರ್ಧಾರವಾಗುತ್ತದೆ.

ಬುನಾದಿ ಶಿಕ್ಷಣವನ್ನು ಯಶಸ್ವಿಗೊಳಿಸಬೇಕಾದರೆ ಮೊದಲು ಅಂಗನವಾಡಿ, ಪೂರ್ವ ಪ್ರಾಥಮಿಕದಲ್ಲಿ ಈಗ ನೀಡುತ್ತಿರುವ ಶಿಕ್ಷಣದ ಹಂತದಲ್ಲಿ ಈಗಿನಿಂದಲೇ ಪೂರ್ವ ತಯಾರಿ ನಡೆಸಬೇಕಾಗುತ್ತದೆ. ಏಕೆಂದರೆ, ಅಲ್ಲಿ 3 ವರ್ಷದಿಂದ 6 ವರ್ಷದವರೆಗೆ ನೀಡುವ ಬುನಾದಿ ಶಿಕ್ಷಣವನ್ನು ಪ್ರತ್ಯೇಕವಾಗಿ ಮಾಡಬೇಕೋ ಅಥವಾ ಈಗಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇರಿಸಬೇಕೋ? ಯಾವ ಶಿಕ್ಷಕರನ್ನು ನೇಮಕ ಮಾಡಬೇಕು? ಅಂಗನವಾಡಿ ಶಿಕ್ಷಕಿಯರನ್ನೇ ಮುಂದುವರಿಸಬೇಕೇ ಎಂಬಂಥ ಅಂಶಗಳೆಲ್ಲ ಮುಖ್ಯವಾಗುತ್ತವೆ.

- ನಿಂಗಪ್ಪ ಮಾಳಶೆಟ್ಟಿ, ವ್ಯಾಸನಕೆರೆ, ಹೊಸಪೇಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.