ಇಂದೋರ್: ಎಂಥ ಅವಕಾಶ ದೊರೆತರು ಪಾಕಿಸ್ತಾನದಲ್ಲಿ ಗಾಯನ ಮಾಡುವುದಿಲ್ಲ ಎಂದು ದೇಶದ ಹೆಸರಾಂತ ಭಜನ ಗೀತೆಗಳ ಹಿರಿಯ ಗಾಯಕ ಅನೂಪ್ ಜಲೊಟಾ ಹೇಳಿದ್ದಾರೆ.
‘ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರ ಪಾಕಿಸ್ತಾನ. ನಮ್ಮ ದೇಶದೊಳಗೆ ನುಸುಳಿ ಅಮಾಯಕರ ಹತ್ಯೆ ಮಾಡುವ ಪಾಪಿಗಳ ರಾಷ್ಟ್ರಕ್ಕೆ ಎಂದಿಗೂ ಕಾಲಿಡುವುದಿಲ್ಲ’ ಎಂದು ಅನೂಪ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಗಾಯನ ಮಾಡಲು ಆಹ್ವಾನ ನೀಡಲಾಗಿತ್ತು. ಆದರೆ ಅದನ್ನು ಜಲೊಟಾ ತಿರಸ್ಕರಿಸಿದ್ದಾರೆ. ಅಲ್ಲದೇ, ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸುವ ಕಲಾವಿದರಿಗೆ ಭಯೋತ್ಪಾದನೆ ವಿರುದ್ಧ ಜಾಗೃತಿ ಮೂಡಿಸಲು ತಮ್ಮ ದೇಶದ ನಾಯಕರಿಗೆ ತಿಳಿಸಬೇಕು ಎಂದು 63 ರ ಪ್ರಾಯದ ಗಾಯಕ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.