ಮುಸ್ಸಂಜೆ ಬಾನು ಕೆಂಪಾಗಿ
ಸೂರ್ಯ ಮನೆ ಸೇರುವಾಗ
ಹಕ್ಕಿಯೊಂದು ತನ್ಮನೆಗೆ ಹೋಗುತ್ತಿತ್ತು
ತನ್ನ ಕರುಳ ಕುಡಿಯ
ನೆನೆದು ಸಂತಸದಿಂದ
ನೆನೆನೆನೆದು ನಗುನಗುತ
ಖುಷಿ ಖುಷಿಯಾಗಿ ಹಾರುತ್ತಿತ್ತು
ಬಾಯ್ತುಂಬ ಹುಳ ಹುಪ್ಪಟೆ
ಕಂದನಿಗೆ ಕೊಡುವ ಹಂಬಲದಿಂದ
ಪ್ರೀತಿಯ ಮಮಕಾರ ಕಣ್ಣಲ್ಲಿ
ತುಂಬಿಕೊಂಡು ಆನಂದದಿಂದ ಹಾರುತ್ತಿತ್ತು
ಮಮಕಾರಕ್ಕಿಂದು ಬೆಲೆ ಇಲ್ಲೆಂಬಂತೆ
ಮರಿಯು ಹೊರ ಬಂದಿತ್ತು
ಅಲ್ಲೇ ಇದ್ದೊಂದು ದುಷ್ಟ ಸರ್ಪಕೆ
ಸಮಯ ಸಿದ್ಧಿಸಿತ್ತು
ಹಕ್ಕಿ ಗೂಡ ಸೇರಿತ್ತು
ಆದರೆ ಅಲ್ಲಿ ಬರೀ ನೋವಿತ್ತು.
–-ಅಮರ್ತ್ಯ ಸಿದ್ಧಾರ್ಥ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.