ADVERTISEMENT

ಸೊಳ್ಳೆರಾಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 19:30 IST
Last Updated 22 ಜೂನ್ 2019, 19:30 IST
ಕಲೆ: ಶಶಿಧರ ಹಳೇಮನಿ
ಕಲೆ: ಶಶಿಧರ ಹಳೇಮನಿ   

ಬಡವ ಬಲ್ಲಿದನೆನ್ನದೆ

ಹಿರಿಯ ಕಿರಿಯರ ತಾಳೆ ಹಾಕದೆ

ತಾರತಮ್ಯವನ್ನೆಲ್ಲೂ ಮಾಡದೆ

ADVERTISEMENT

ಗಡಿ - ಬೇಲಿಗಳಲ್ಲೆಲ್ಲೂ ನಿಲ್ಲದೆ

ಯಾರ ಆಮಿಷಕ್ಕೂ ಒಳಪಡದೆ

ಪ್ರತಿ ಮನೆಯಲ್ಲೂ ಅವತರಿಸಿ

ತನ್ನ ಸಾಮ್ರಾಜ್ಯವನ್ನು ಬಲಪಡಿಸಿ

ದಿನೇ ದಿನೇ ಒಂದು ನೂರಾಗಿ... ಸಾವಿರವಾಗಿ

ಸತತವಾಗಿ ಹಗಲು-ಇರುಳನ್ನದೆ ದಾಳಿ ಮಾಡುವೆ

ಬತ್ತಿಗಳೆಲ್ಲ ಬತ್ತಿ ಹೋದವು

ರಸಹೀರುವ ಯಂತ್ರಗಳೆಲ್ಲ ಬಿದ್ದುಹೋದವು

ತರಾವರಿ ಔಷಧಿ ತುಂಬಿದ ಕಾಗದಗಳೆಲ್ಲ ಸುಟ್ಟುಹೋದವು

ಜಿಲೇಬಿಯ ಹೋಲುವ ಕಡ್ಡಿಗಳು ಬೂದಿಯಾದವು

ಕೊನೆಗೊಂದು ‘ಬ್ಯಾಟು’ ಮನೆಯ ತುಂಬಿ

ಚಟ-ಪಟ ಎಂದಾಗ ಎಲ್ಲರ ಮನ ತುಂಬಿ

ಮನೆ ಮಕ್ಕಳೆಲ್ಲ ಮುಯ್ಯಿ ತೀರಿಸಿಕೊಂಡಾಯಿತು

ಸೊಳ್ಳೆರಾಯ... ಸರಿಯೇ ನಿನ್ನೀ ಕಾರ್ಯ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.