ADVERTISEMENT

ಬರದ ಹಾಡು

ಆರ್‌.ಪಿ.ಹೆಗಡೆ
Published 23 ಫೆಬ್ರುವರಿ 2019, 19:30 IST
Last Updated 23 ಫೆಬ್ರುವರಿ 2019, 19:30 IST
ಚಿತ್ರ: ಶಿಲ್ಪಾ ಕಬ್ಬಿಣಕಂತಿ
ಚಿತ್ರ: ಶಿಲ್ಪಾ ಕಬ್ಬಿಣಕಂತಿ   

ಮಳಿ ಯಾಕ ಕೈಕೊಟ್ಟವೋ... ಹೇ ಶಿವನೆ ಬೆಳೆ ಸುಟ್ಟು ಉರಿದ್ಹೋದವೋ

ಮಳಿ ಯಾಕ ಕೈಕೊಟ್ಟವೋ... ಹೇ ಶಿವನೆ ಬೆಳೆ ಸುಟ್ಟು ಉರಿದ್ಹೋದವೋ

ಹೊಳೆ ಹಳ್ಳ ಬರಿದಾದೊ ಕೆರೆ ಕುಂಟೆ ತಳ ಕಂಡೊ

ADVERTISEMENT

ನೆರಳಿಗೂ ಗತಿಯಿಲ್ಲವೋ... ಭೂಮ್ತಾಯಿ ಒಡಲೆಲ್ಲ ಹುಡಿಯಾದವೋ

ಜನರೆಲ್ಲ ತಳಮಳಿಸಿ ಕಂಗೆಟ್ಟವೋ

ಮಳಿಯಾಕ ಕೈಕೊಟ್ಟವೋ ಹೇ ಶಿವನೆ...

ಹಸಿರಿನ ಹೆಸರಿಲ್ಲ, ಮೇವು ನೀರುಗಳಿಲ್ಲ

ಹಸು– ಕರು ಹಣ್ಣಾದವೋ... ಹಸಿವಿನಿಂದ ಅಸುನೀಗಿ ಮಣ್ಣಾದವೋ

ಹಣಕಾಗಿ ಕಟುಕರಿಗೆ ಬಲಿಯಾದವೋ

ಮಳಿ ಯಾಕ ಕೈಕೊಟ್ಟವೋ... ಹೇ ಶಿವನೆ...

ಹಣವು ಕೈಯೊಳಗಿಲ್ಲ ಉಣಲು ಧಾನ್ಯಗಳಿಲ್ಲ

ರೈತರು ಬಡವಾದರೋ... ಸಾಲಕ್ಕೆ ಹೊಲ ಮನಿ ಅಡವಾದವೋ

ಗುಳೆಯೆದ್ದು ಹಳ್ಳಿಗಳು ಬರಿದಾದವೋ

ಮಳಿ ಯಾಕ ಕೈಕೊಟ್ಟವೋ... ಹೇ ಶಿವನೆ...

ಉಳ್ಳವರ ಹರಕೆಯಲಿ, ಬರವೆಂಬ ಮಳೆಬಿದ್ದೊ

ಆಸೆಗಳು ಹಸಿಯಾದವೋ... ಧನಿಕರ ಕಣಜದಲಿ ಸಸಿಯಾದವೋ

ಹೊಡೆಯೊಡೆದು ಝಣಝಣ ಸದ್ದಾದವೋ...

ಮಳಿ ಯಾಕ ಕೈಕೊಟ್ಟವೋ... ಹೇ ಶಿವನೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.