ADVERTISEMENT

ಕಣ್ಣಿಗೆ ಹಬ್ಬ ತರುವ ರೇಷ್ಮೆ ಸೀರೆಗಳು: ಆಶಿಕಾ ರಂಗನಾಥ್‌

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 11:57 IST
Last Updated 27 ಮಾರ್ಚ್ 2022, 11:57 IST
ಆಶಿಕಾ ರಂಗನಾಥ್‌ ( ಮಧ್ಯ ಇರುವವರು)
ಆಶಿಕಾ ರಂಗನಾಥ್‌ ( ಮಧ್ಯ ಇರುವವರು)   

ಬೆಂಗಳೂರು: ನಗರದಲ್ಲಿ ಇದೇ ಮೊದಲ ಸಲರೇಷ್ಮೆ ಸೀರೆಗಳ ಬ್ರ್ಯಾಂಡ್‌ ʻಮುಗ್ಧʼ ಮಳಿಗೆಯನ್ನು ತೆರೆಯುತ್ತಿದ್ದು ಈ ಬಗ್ಗೆ ಪ್ರಕಟಣೆ ಹೊರಡಿಸಿದೆ.

ಈ ಮಳಿಗೆಯಲ್ಲಿ ಕಾಂಚೀವರಂ ನಿಂದ ಬನಾರಸಿ ಸೀರೆಗಳವರೆಗೂ ಹಾಗೂ ಇಕ್ಕಟಾದಿಂದ ಗಡ್ವಾಲ್‌, ಪೈಥಾನಿಸ್‌ನಿಂದ ಉಪ್ಪದಾಸ್‌ವರೆಗೂ ಹೀಗೆ ಭಾರತದ ಬೇರೆ ಬೇರೆ ಭಾಗಗಳಲ್ಲಿ ನೇಯ್ಗೆಯಾದ ಸುಂದರ ಸೀರೆಗಳು ಮುಗ್ದ ಮಳಿಗೆಯಲ್ಲಿ ಲಭ್ಯವಿರುತ್ತವೆ.

ಈ ಮಳಿಗೆಯನ್ನು ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ತೆರೆಯಲಾಗಿದೆ ಎಂದು ವಿನ್ಯಾಸಕಿ ಹಾಗೂ ಸಂಸ್ಥಾಪಕಿ ಶಶಿ ವಂಗಪಲ್ಲಿ ತಿಳಿಸಿದ್ದಾರೆ.

ADVERTISEMENT

ಮಳಿಗೆಯ ಉದ್ಘಾಟನೆಯಲ್ಲಿ ನಟಿ ಆಶಿಕಾ ರಂಗನಾಥ್‌ ಭಾಗವಹಿಸಿದ್ದರು. ಮಳಿಗೆಯಲ್ಲಿರುವ ರೇಷ್ಮೆ ಸೀರೆಗಳು ಕಣ್ಣಿಗೆ ಹಬ್ಬ ತರುತ್ತಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.