ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ಬೆಂಗಳೂರು ವೃತ್ತವು ತನ್ನ ಸಂಪರ್ಕ ಜಾಲ-2ರ ಅಡಿಯಲ್ಲಿ ಹೊಸ ವಲಯ ಸ್ಥಾಪಿಸಿದೆ.ಬೆಂಗಳೂರು ಮಹಾನಗರ ವಲಯ ವ್ಯಾಪ್ತಿ ಹೊರಗಿನ ದಕ್ಷಿಣ ಮತ್ತು ಕರಾವಳಿ ಕರ್ನಾಟಕದ 15 ಜಿಲ್ಲೆಗಳನ್ನು ಒಳಗೊಂಡ ಹೊಸ ವಲಯವು ಈಗ ಅಸ್ತಿತ್ವಕ್ಕೆ ಬಂದಿದೆ.
ಇಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್ನ ಚೀಫ್ ಜನರಲ್ ಮ್ಯಾನೇಜರ್ ಅಶ್ವಿನಿ ಮೆಹ್ರಾ ಅವರು ಈ ಹೊಸ ವಲಯವು ಅಸ್ತಿತ್ವಕ್ಕೆ ಬಂದಿರುವುದನ್ನು ಪ್ರಕಟಿಸಿದರು.ಈ ಮೊದಲು ಕೇವಲ ಎರಡು ವಲಯಗಳು ಕಾರ್ಯನಿರ್ವಹಿಸುತ್ತಿದ್ದವು. ವಹಿವಾಟು ಉತ್ತೇಜಿಸಲು ಮತ್ತು ಬ್ಯಾಂಕ್ ಶಾಖೆಗಳ ಉತ್ತಮ ನಿರ್ವಹಣೆ ಉದ್ದೇಶಕ್ಕೆ ಈ ಹೊಸ ವಲಯ ಸ್ಥಾಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.