ಬೆಂಗಳೂರು: ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್ಕೆಸಿಸಿಐ) ಬುಧವಾರ ಇಲ್ಲಿ ಏರ್ಪಡಿಸಿದ್ದ ವಾರ್ಷಿಕ ರಫ್ತು ಶ್ರೇಷ್ಠತೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ರಾಷ್ಟ್ರೀಕೃತ ಕೆನರಾ ಬ್ಯಾಂಕ್, `ಅತ್ಯುತ್ತಮ ಹಣಕಾಸು ಸಂಸ್ಥೆ~ ವಿಭಾಗದಲ್ಲಿ ಸುವರ್ಣ ಪ್ರಶಸ್ತಿ ಪಡೆದುಕೊಂಡಿದೆ.
ರಾಜ್ಯದಲ್ಲಿ ರಫ್ತು ವಹಿವಾಟು ಗಮನಾರ್ಹವಾಗಿ ಬೆಳವಣಿಗೆ ಕಾಣಲು ಬ್ಯಾಂಕ್ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.ದೇಶದಲ್ಲಿ ವಿದೇಶ ವಿನಿಮಯ ವಹಿವಾಟು ಆರಂಭಿಸಿದ ಮೊದಲ ಬ್ಯಾಂಕ್ಗಳಲ್ಲಿ ಕೆನರಾ ಬ್ಯಾಂಕ್ ಕೂಡ ಒಂದಾಗಿದೆ. ಮುಂಬೈನಲ್ಲಿ 1953ರಲ್ಲಿ ತನ್ನ ಮೊದಲ ವಿದೇಶ ವಿಭಾಗದ ಆರಂಭಿಸಿತ್ತು.
ಬ್ಯಾಂಕ್ ಅಂದಿನಿಂದ ದೇಶದ ವಿದೇಶಿ ವಿನಿಮಯ ವಹಿವಾಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. 2010-11ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್, ರೂ 1,24,094 ಕೋಟಿಗಳಷ್ಟು ವಿದೇಶಿ ವಿನಿಮಯ ವಹಿವಾಟು ನಡೆಸಿದ್ದು, ರಫ್ತು ವಹಿವಾಟು ರೂ 45,657 ಕೋಟಿಗಳಷ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.