ADVERTISEMENT

ಟೀ ಮಂಡಳಿಗೆ ನಟರಾಜ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಭಾರತ ಟೀ ಮಂಡಳಿಯ ನೂತನ ಉಪಾಧ್ಯಕ್ಷರಾಗಿ  ಕರ್ನಾಟಕದ  ಸಿ.ಎನ್.ನಟರಾಜ್  ಆಯ್ಕೆಯಾಗಿದ್ದಾರೆ. 

 ಕೋಲ್ಕತ್ತದಲ್ಲಿ ಇತ್ತೀಚೆಗೆ ನಡೆದ ಟೀ ಮಂಡಳಿ ಸಭೆಯಲ್ಲಿ ನಟರಾಜ್ ಅವರನ್ನು 2011-12ನೇ ಸಾಲಿನ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು .

ಸದ್ಯ  ದಕ್ಷಿಣ ಭಾರತ ಪ್ಲಾಂಟೇಷನ್ ಬೆಳೆಗಾರರ ಸಂಯುಕ್ತ ಒಕ್ಕೂಟದ (ಉಪಾಸಿ) ಅಧ್ಯಕ್ಷರಾಗಿರುವ ಚಿಕ್ಕಮಗಳೂರಿನ ಕಾಫಿ ಪ್ಲಾಂಟರ್ ನಟರಾಜ್,  ಸಂಬಾರ ಮಂಡಳಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.