ADVERTISEMENT

ಪಿಂಚಣಿದಾರರಿಂದ ‘ಭಿಕ್ಷಾ ಆಂದೋಲನ’

ಪಿಟಿಐ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಪಿಂಚಣಿದಾರರಿಂದ ‘ಭಿಕ್ಷಾ ಆಂದೋಲನ’
ಪಿಂಚಣಿದಾರರಿಂದ ‘ಭಿಕ್ಷಾ ಆಂದೋಲನ’   

ನವದೆಹಲಿ: ತಿಂಗಳ ಕನಿಷ್ಠ ಪಿಂಚಣಿ ಮೊತ್ತವನ್ನು ಈಗಿರುವ₹ 1,000 ದಿಂದ  ₹ 7,500ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಪಿಂಚಣಿದಾರರು ‘ಭಿಕ್ಷಾ ಆಂದೋಲನ’ ಆರಂಭಿಸಿದ್ದಾರೆ.

ಯೋಜನೆಯಲ್ಲಿ ಸಿಗುತ್ತಿರುವ ಮೊತ್ತ ಅತ್ಯಂತ ಕಡಿಮೆ ಇದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಡಲು ಮತ್ತು ಬೇಡಿಕೆ ಈಡೇರಿಸುವಂತೆ ಮಾಡಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಕಾರ್ಮಿಕರ ಪಿಂಚಣಿ ಯೋಜನೆಯ (1995ರ ಕಾರ್ಮಿಕರ ಪಿಂಚಣಿ ಯೋಜನೆ–ಇಪಿಎಸ್‌ 95) ಸಂಘರ್ಷ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಜನವರಿ 10ರ ಒಳಗೆ ನಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಆಂದೋನಲ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದೂ ಸಮಿತಿಯು ಎಚ್ಚರಿಕೆ ನೀಡಿದೆ.

ADVERTISEMENT

ಸದ್ಯ ತಿಂಗಳ ಪಿಂಚಣಿ ಮೊತ್ತ ₹ 1,000 ಇದೆ. ಕೇಂದ್ರ ಸರ್ಕಾರದ ಬಳಿ ಪಿಂಚಣಿ ನಿಧಿ ₹ 3 ಲಕ್ಷ ಕೋಟಿ ಇದೆ. ಹೀಗಿದ್ದರೂ 60 ಲಕ್ಷ ಪಿಂಚಣಿದಾರರಲ್ಲಿ 40 ಲಕ್ಷ ಪಿಂಚಣಿದಾರರು ಪ್ರತಿ ತಿಂಗಳು  ₹ 1,500ಕ್ಕಿಂತಲೂ ಕಡಿಮೆ ಮೊತ್ತ ಪಡೆಯುತ್ತಿದ್ದಾರೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.