ನವದೆಹಲಿ: ನೋಟು ರದ್ದತಿ ನಂತರ ಸಂಕಷ್ಟದಲ್ಲಿರುವ ಕೈಗಾರಿಕಾ ಕ್ಷೇತ್ರಕ್ಕೆ ಮತ್ತು ವೇತನ ಪಡೆಯುವ ವರ್ಗದವರಿಗೆ ತೆರಿಗೆ ಕಡಿತ ನೀಡುವ ಮೂಲಕ ಸಾಮಾನ್ಯ ಜನರಿಗೆ ಸಮಾಧಾನ ತರಬಹುದು ಎಂಬ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
ಕಳೆದ ಬಜೆಟ್ ಪರಿಣಾಮದಿಂದ ಬಳಕೆಯ ಮಟ್ಟ ಕುಸಿತ, ನಿರುದ್ಯೋಗ ಹೆಚ್ಚಳ ಮತ್ತು ಜಿಡಿಪಿ ಕುಸಿತವುಂಟಾಗಿತ್ತು. ಆದರೂ, ಮೋದಿಯವರು 1,45,000 ಕೋಟಿಯ ಕಾರ್ಪೊರೇಟ್ ತೆರಿಗೆ ಕಡಿತ ನೀಡಿದ್ದರು. ಬಜೆಟ್ 2020 ವೇತನ ವರ್ಗದವರಿಗೆ ತೆರಿಗೆ ಕಡಿತ ಮತ್ತು ಗ್ರಾಮೀಣ ಭಾರತಕ್ಕೆ ಹೂಡಿಕೆ ನೀಡುವಂತಾಗಲಿ ಎಂದಿದ್ದಾರೆ ಸುರ್ಜೇವಾಲಾ.
ಸಾಮಾನ್ಯ ಜನರ ನಿರೀಕ್ಷೆಗಳು ಈಡೇರುವಂತಾಗಲಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ನೋಟು ರದ್ದತಿ ನಂತರ ಕಷ್ಟ ಅನುಭವಿಸುತ್ತಿರುವ ಸಾಮಾನ್ಯ ಜನರಿಗೆ ಮತ್ತು ಉದ್ಯಮಗಳಿಗೆ ಎನ್ಡಿಎ ಸರ್ಕಾರದ ಬಜೆಟ್ ನೆರವಾಗಲಿ. ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸುವುದರ ಜತೆಗೆ ಎಲ್ಲ ಕ್ಷೇತ್ರಗಳಿಗೂ ಸಹಾಯ ಮಾಡಲಿ ಎಂದು ಗೆಹ್ಲೋಟ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.