ಬೆಂಗಳೂರು: ಚಂದ್ರು ಅಯ್ಯರ್ ಅವರನ್ನು ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಹಾಗೂ ದಕ್ಷಿಣ ಏಷ್ಯಾಕ್ಕೆ ಬ್ರಿಟನ್ನಿನ ಡೆಪ್ಯುಟಿ ಟ್ರೇಡ್ ಕಮಿಷನರ್ (ಹೂಡಿಕೆ) ಆಗಿ ನೇಮಕ ಮಾಡಲಾಗಿದೆ.
ಕರ್ನಾಟಕ ಮತ್ತು ಕೇರಳ ರಾಜ್ಯಗಳ ಜೊತೆ ಬ್ರಿಟನ್ನಿನ ಸಂಬಂಧ ಹೆಚ್ಚಿಸುವುದು, ಈ ರಾಜ್ಯಗಳ ಜೊತೆ ವಾಣಿಜ್ಯೋದ್ಯಮಿಗಳ ಹಾಗೂ ಸಾರ್ವಜನಿಕರ ಒಡನಾಟ ಹೆಚ್ಚಿಸುವುದು ಅವರ ಹೊಣೆಗಾರಿಕೆ ಆಗಿರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅಲ್ಲದೆ, ಭಾರತದಿಂದ ಆಗುವ ವಿದೇಶಿ ನೇರ ಬಂಡವಾಳ ಹೂಡಿಕೆಗಳು ಬ್ರಿಟನ್ ಕಡೆ ಸಾಗುವಂತೆ ಮಾಡುವ ಜವಾಬ್ದಾರಿಯೂ ಅವರ ಮೇಲೆ ಇರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.