ನವದೆಹಲಿ: ಮುಂಗಾರು ಚುರುಕಾಗಿದ್ದು, ರೈತರು 7.99 ಕೋಟಿ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೊಲಿಸಿದರೆ ಬಿತ್ತನೆ ಪ್ರದೇಶದಲ್ಲಿ ಶೇ 18.3ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ6.75 ಕೋಟಿ ಹೆಕ್ಟೇರ್ಗಳಲ್ಲಿ ಬಿತ್ತನೆ ಕಾರ್ಯ ನಡೆದಿತ್ತು.
ರಾಜ್ಯ ಸರ್ಕಾರಗಳು ನೀಡುವ ಮಾಹಿತಿಯ ಆಧಾರದ ಮೇಲೆ ಜೂನ್ 24ರವರೆಗಿನ ಅಂಕಿ–ಅಂಶಗಳನ್ನು ನೀಡಲಾಗಿದ್ದು, ತಾತ್ಕಾಲಿವಾಗಿವೆ. ಮಳೆ ಸುರಿಯುವ ಪ್ರಮಾಣ ಆಧರಿಸಿ ಬಿತ್ತನೆ ಪ್ರದೇಶದಲ್ಲಿಯೂ ಏರಿಕೆಯಾಗಬಹುದು ಎಂದು ಸಚಿವಾಲಯ ಹೇಳಿದೆ.
ಬಿತ್ತನೆ ವಿವರ (ಜುಲೈ 17ರವರೆಗೆ)
ಬೆಳೆ; ಕಳೆದ ವರ್ಷ; ಈ ವರ್ಷ
ಭತ್ತ; 1.87ಕೋಟಿ ಹೆಕ್ಟೇರ್; 2.2 ಕೋಟಿ ಹೆಕ್ಟೇರ್
ಹತ್ತಿ; 96 ಲಕ್ಷ ಹೆಕ್ಟೇರ್; 1.18 ಕೋಟಿ ಹೆಕ್ಟೇರ್
ಸೋಯಾಬೀನ್; 97 ಲಕ್ಷ ಹೆಕ್ಟೇರ್; 1.14 ಕೋಟಿ ಹೆಕ್ಟೇರ್
ಬೇಳೆಕಾಳು; 79 ಲಕ್ಷ ಹೆಕ್ಟೇರ್; 99 ಲಕ್ಷ ಹೆಕ್ಟೇರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.