ADVERTISEMENT

ತುರ್ತು ಸಂದರ್ಭದಲ್ಲಿ ಚಿನ್ನಾಭರಣ ಮಾರಾಟವೇ ಸೂಕ್ತ : ಜೋಯಾಲುಕ್ಕಾಸ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 21:22 IST
Last Updated 28 ಜುಲೈ 2020, 21:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಣಕಾಸಿನ ತುರ್ತು ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಗರಿಷ್ಠ ಬಡ್ಡಿದರಕ್ಕೆ ಚಿನ್ನಾಭರಣ ಅಡವಿಡುವ ಬದಲಿಗೆ ಅವುಗಳನ್ನು ಮಾರಾಟ ಮಾಡುವುದು ಉತ್ತಮ ಎಂದು ಚಿನ್ನಾಭರಣಗಳ ಮಾರಾಟ ಕಂಪನಿ ಜೋಯಾಲುಕ್ಕಾಸ್‌ ಹೇಳಿದೆ.

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚಾಲ್ತಿಯಲ್ಲಿರುವ ಬೆಲೆ ಚಿನ್ನ ವ್ಯಾಪಾರದ ಇತಿಹಾಸದಲ್ಲಿಯೇ ಅತಿ ಹೆಚ್ಚಿನದ್ದಾಗಿದೆ. ಜನ ತಮ್ಮಲ್ಲಿರುವ ಹಳೆಯ ಚಿನ್ನಾಭರಣಗಳನ್ನು ಗರಿಷ್ಠ ಮೌಲ್ಯಕ್ಕೆ ಮಾರಾಟ ಮಾಡುವ ಅವಕಾಶವನ್ನು ಜೋಯಾಲುಕ್ಕಾಸ್‌ ಒದಗಿಸಿದೆ. ಎಲ್ಲಿಯೇ ಖರೀದಿಸಿದ್ದರೂ, ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಧಿಕ ಬೆಲೆಗೆ ಜೋಯಾಲುಕ್ಕಾಸ್‌ ಅವುಗಳನ್ನು ಖರೀದಿಸಲಿದೆ.

ಇದಲ್ಲದೆ, ಹಳೆಯ ಚಿನ್ನಾಭರಣಗಳನ್ನು ಇತ್ತೀಚಿನ ಹೊಸ ವಿನ್ಯಾಸದ ಆಭರಣಗಳೊಂದಿಗೆ ಹೆಚ್ಚಿನ ಮೌಲ್ಯಕ್ಕೆ ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನೂ ಕಲ್ಪಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.