ADVERTISEMENT

ಪ್ರವಾಸಿಗರಿಗೆ ಇಂಡಿಯನ್ ಹೋಟೆಲ್‌ ಕಂಪನಿಯ ಕೊಡುಗೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 15:23 IST
Last Updated 14 ಜೂನ್ 2020, 15:23 IST

ಬೆಂಗಳೂರು: ತನ್ನ ಒಡೆತನದ ಹೋಟೆಲ್‌ಗಳಲ್ಲಿ ಪ್ರವಾಸಿಗರಿಗೆ ಅತ್ಯಧಿಕ ಸುರಕ್ಷತೆಯ, ಸ್ವಚ್ಛತೆಯ ಉನ್ನತ ಗುಣಮಟ್ಟದ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಇಂಡಿಯನ್ ಹೋಟೆಲ್ ಕಂಪನಿ (ಐಎಚ್‍ಸಿಎಲ್) ತಿಳಿಸಿದೆ.

‘ಲಾಕ್‌ಡೌನ್‌ ಸಡಿಲಿಕೆಯಿಂದ ಪ್ರವಾಸ ತೆರಳುವ ಅತಿಥಿಗಳು ಹೋಟೆಲ್‌ಗಳಲ್ಲಿ ಕಳೆಯುವ ಎಲ್ಲ ಸಂದರ್ಭಗಳಲ್ಲಿ ಸ್ವಚ್ಛತೆ, ಸುರಕ್ಷತೆ ಮತ್ತು ಗುಣಮಟ್ಟದ ನಿರ್ವಹಣೆಗೆ ಒತ್ತು ನೀಡಲಾಗುವುದು’ ಎಂದು ತಾಜ್ ವೆಸ್ಟ್ ಎಂಡ್ ಹೋಟೆಲ್‍ನ ಕರ್ನಾಟಕ ವಲಯದ ಜನರಲ್ ಮ್ಯಾನೇಜರ್ ಸೋಮನಾಥ ಮುಖರ್ಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT