ನವದೆಹಲಿ: ಜನಧನ್ ಬ್ಯಾಂಕ್ ಖಾತೆಗಳಲ್ಲಿನ ಒಟ್ಟಾರೆ ಠೇವಣಿ ಮೊತ್ತವು ಶೀಘ್ರದಲ್ಲಿಯೇ ₹ 90 ಸಾವಿರ ಕೋಟಿ ದಾಟಲಿದೆ.
ಬ್ಯಾಂಕಿಂಗ್ ಸೌಲಭ್ಯ ವಂಚಿತರ ಅನುಕೂಲಕ್ಕಾಗಿ ‘ಪ್ರಧಾನಮಂತ್ರಿ ಜನಧನ್ ಯೋಜನೆಯನ್ನು (ಪಿಎಂಜೆಡಿವೈ) 2014ರಲ್ಲಿ ಆರಂಭಿಸಲಾಗಿತ್ತು.
ಯೋಜನೆಯ ಯಶಸ್ಸಿನಿಂದ ಉತ್ತೇಜನಗೊಂಡಿದ್ದ ಕೇಂದ್ರ ಸರ್ಕಾರವು ಈ ಖಾತೆದಾರರಿಗೆ ಅಪಘಾತ ವಿಮೆ ಪರಿಹಾರದ ಮೊತ್ತವನ್ನು ₹ 1 ಲಕ್ಷದಿಂದ ₹ 2 ಲಕ್ಷಕ್ಕೆ ಹೆಚ್ಚಿಸಿತ್ತು. ೆಚ್ಚುವರಿ ಸಾಲ ಸೌಲಭ್ಯವನ್ನು ₹ 10 ಸಾವಿರಕ್ಕೆ ಏರಿಸಿತ್ತು. ಪ್ರತಿ ಕುಟುಂಬಕ್ಕೊಂದು ಖಾತೆ ನಿಯಮವನ್ನು ಕುಟುಂಬದ ಪ್ರತಿಯೊಬ್ಬ ವಯಸ್ಕನಿಗೆ ವಿಸ್ತರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.