ಬೆಂಗಳೂರು: ರಾಮ್ರಾಜ್ ಕಾಟನ್ ಸಂಸ್ಥೆಯ ಹೊಸ ಪ್ರಚಾರ ರಾಯಭಾರಿಯಾಗಿ ನಟ ರಿಷಬ್ ಶೆಟ್ಟಿ ನೇಮಕವಾಗಿದ್ದಾರೆ.
ರಿಷಬ್ ಅವರು ಸರಳ ಸಜ್ಜನಿಕೆಯ ನಟ. ಅವರಿಗೆ ಪರಂಪರೆಯ ಬೇರುಗಳ ಜೊತೆಗೆ ಆಪ್ತ ನಂಟಿದೆ. ಅವರು ರಾಮ್ರಾಜ್ ಬ್ರ್ಯಾಂಡ್ ಜೊತೆಗೆ ಕೈಜೋಡಿಸಿರುವುದು ಅತ್ಯಂತ ಗೌರವ ಹಾಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಅರುಣ್ ಈಶ್ವರ್ ಹೇಳಿದ್ದಾರೆ.
ರಿಷಬ್ ಅವರ ಸೃಜನಾತ್ಮಕ ನಟನಾ ಸಾಮರ್ಥ್ಯವು ‘ಕಾಂತಾರ’ ಸಿನಿಮಾ ಮೂಲಕ ನಿರೂಪಿತವಾಗಿದೆ. ಪಾರಂಪರಿಕೆ ಉಡುಗೆಯಾದ ಪಂಚೆಯನ್ನು ಉಡುವ ಭಾರತದ ಕೆಲವೇ ನಟರ ಪೈಕಿ ಅವರೂ ಒಬ್ಬರಾಗಿದ್ದಾರೆ. ಸಾಂಸ್ಕೃತಿಕ ಉತ್ಪನ್ನಗಳ ಬಗ್ಗೆ ಸಂಸ್ಥೆ ಮತ್ತು ರಿಷಬ್ ಅವರ ನಂಬಿಕೆ ಒಂದೇ ಆಗಿದೆ ಎಂದಿದ್ದಾರೆ.
ರಾಮ್ರಾಜ್ ಬ್ರ್ಯಾಂಡ್ ದಕ್ಷಿಣ ಭಾರತವನ್ನು ದಾಟಿ ಉತ್ತರ ಭಾರತಕ್ಕೂ ಪ್ರವೇಶಿಸುತ್ತಿದೆ. ರಿಷಬ್ ಅವರೊಂದಿಗಿನ ಬೆಸುಗೆಯು ನಮ್ಮ ಬ್ರ್ಯಾಂಡ್ಗೆ ನೆರವಾಗುತ್ತದೆ ಎಂದು ತಿಳಿಸಿದ್ದಾರೆ.
‘ಸಂಸ್ಥೆಯ ಸಂಸ್ಥಾಪಕರಾದ ನಾಗರಾಜನ್ ಅವರ ಸರಳತೆ, ಸಾಮಾಜಿಕ ಕೆಲಸಗಳು ನನ್ನನ್ನು ರಾಯಭಾರಿಯಾಗಿ ಒಪ್ಪಿಕೊಳ್ಳುವಂತೆ ಮಾಡಿವೆ’ ಎಂದು ನಟ ರಿಷಬ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.