ADVERTISEMENT

ಕಳಾಮಂದಿರ್ ಮಳಿಗೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 14:26 IST
Last Updated 10 ಮಾರ್ಚ್ 2023, 14:26 IST
ಸಾಯಿ ಸಿಲ್ಕ್ಸ್‌ (ಕಳಾಮಂದಿರ್‌) ಲಿಮಿಟೆಡ್‌ನ ಪ್ರವರ್ತಕಿ ಝಾನ್ಸಿ ರಾಣಿ ಛಲವಾದಿ, ಕಂಪನಿಯ ಪೂರ್ಣಾವಧಿ ನಿರ್ದೇಶಕ ಕನಕ ದುರ್ಗಾ ರಾವ್ ಛಲವಾದಿ ಮತ್ತು ನಟ ಸುದೀಪ್ ಅವರು ಕಳಾಮಂದಿರ್ ಮಳಿಗೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಾಯಿ ಸಿಲ್ಕ್ಸ್‌ (ಕಳಾಮಂದಿರ್‌) ಲಿಮಿಟೆಡ್‌ನ ಪ್ರವರ್ತಕಿ ಝಾನ್ಸಿ ರಾಣಿ ಛಲವಾದಿ, ಕಂಪನಿಯ ಪೂರ್ಣಾವಧಿ ನಿರ್ದೇಶಕ ಕನಕ ದುರ್ಗಾ ರಾವ್ ಛಲವಾದಿ ಮತ್ತು ನಟ ಸುದೀಪ್ ಅವರು ಕಳಾಮಂದಿರ್ ಮಳಿಗೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.   

ಬೆಂಗಳೂರು: ಸಾಂಪ್ರದಾಯಿಕ ಉಡುಗೆಗಳು ಹಾಗೂ ಸೀರೆಗಳ ಮಾರಾಟ ವಲಯದ ಪ್ರಮುಖ ಕಂಪನಿಯಾಗಿರುವ ಸಾಯಿ ಸಿಲ್ಕ್ಸ್‌ (ಕಳಾಮಂದಿರ್‌) ಲಿಮಿಟೆಡ್ (ಎಸ್‌ಎಸ್‌ಕೆಎಲ್) ತನ್ನ 54ನೆಯ ಮಳಿಗೆಯನ್ನು ಬೆಂಗಳೂರಿನ ಕಲ್ಯಾಣ ನಗರದಲ್ಲಿ ಶುಕ್ರವಾರ ಆರಂಭಿಸಿದೆ. ಖ್ಯಾತ ನಟ ಸುದೀಪ್ ಅವರು ಮಳಿಗೆಯನ್ನು ಉದ್ಘಾಟಿಸಿದರು.

ಇದು ಬೆಂಗಳೂರಿನಲ್ಲಿ ‘ಕಳಾಮಂದಿರ್’ ಆರಂಭಿಸಿರುವ ಮೂರನೆಯ ಮಳಿಗೆ. ಹೊಸ ಮಳಿಗೆಯು ನಾಲ್ಕು ಮಹಡಿಗಳಲ್ಲಿ ಒಟ್ಟು 10 ಸಾವಿರ ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿದೆ. ಸಮಕಾಲೀನ ವಿನ್ಯಾಸದ ಹಲವು ಬಗೆಯ ಸೀರೆಗಳನ್ನು ಇಲ್ಲಿ ಕಾಣಬಹುದು ಎಂದು ಪ್ರಕಟಣೆ ತಿಳಿಸಿದೆ.

₹ 1 ಸಾವಿರದಿಂದ ಆರಂಭವಾಗಿ ₹ 1 ಲಕ್ಷದವರೆಗಿನ ಬೆಲೆಯ ಸೀರೆಗಳು ಇಲ್ಲಿ ಲಭ್ಯವಿವೆ. ಸಾಯಿ ಸಿಲ್ಕ್ಸ್‌ (ಕಳಾಮಂದಿರ್) ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ನಾಗಕನಕ ದುರ್ಗಾಪ್ರಸಾದ್ ಛಲವಾದಿ ಅವರು, ‘ನಗರದಲ್ಲಿ ಮೂರನೆಯ ಮಳಿಗೆಯನ್ನು ಆರಂಭಿಸುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಈ ಮಳಿಗೆಯು ವಿಭಿನ್ನ ವಿನ್ಯಾಸಗಳ ಸಮಕಾಲೀನ ಸೀರೆಗಳನ್ನು ಹೊಂದಿದೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.