ಬೆಂಗಳೂರು: ಸ್ವರ್ಣ ಭಾರತಿ ಸಹಕಾರ ಬ್ಯಾಂಕ್, 2018-19 ನೇ ಸಾಲಿನಲ್ಲಿ ₹ 2.54 ಕೋಟಿ ಲಾಭ ಗಳಿಸಿದೆ.
‘ಬ್ಯಾಂಕ್ನಲ್ಲಿ ₹ 6.16 ಕೋಟಿ ಮೀರಿದ ಷೇರು ಬಂಡವಾಳ ಸಂಗ್ರಹವಾಗಿದೆ. ₹ 132 ಕೋಟಿಗೂ ಹೆಚ್ಚು ಠೇವಣಿ ಇಡಲಾಗಿದೆ. ಗ್ರಾಹಕರಿಗೆ ₹ 91 ಕೋಟಿ ಸಾಲ ವಿತರಿಸಲಾಗಿದೆ.ದುಡಿಯುವ ಬಂಡವಾಳ ₹ 148 ಕೋಟಿ ದಾಟಿದೆ. ಲಾಭದ ವಿಷಯದಲ್ಲಿ ಗುರಿ ಮೀರಿದ ಸಾಧನೆ ಮಾಡಲಾಗಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಪಿ. ಎಲ್, ವೆಂಕಟರಾಮ ರೆಡ್ಡಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.