ADVERTISEMENT

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಗಮನ ಸೆಳೆಯುತ್ತಿರುವ ಸ್ತಬ್ಧಚಿತ್ರಗಳು

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 9:12 IST
Last Updated 9 ಜುಲೈ 2020, 9:12 IST
   

ಮೈಸೂರು:ಅರಮನೆ ಅಂಗಳದಲ್ಲಿ ಗಜಪಡೆ ಜೊತೆ ಸಾಗುತ್ತಿರುವ ಸ್ತಬ್ಧಚಿತ್ರಗಳು ಎಲ್ಲರ ಗಮನ ಸೆಳೆಯುತ್ತಿವೆ. ವಿಶ್ವವಿದ್ಯಾಲಯಗಳು ನಡೆದು ಬಂದ ಹಾದಿ ಬಗ್ಗೆ ಮಾಹಿತಿ ನೀಡುವ ಸ್ತಬ್ಧಚಿತ್ರ ಸೇರಿದಂತೆ ಅನುಭವ ಮಂಟಪ, ವಿಜಾಪುರದ ಗೋಲಗುಮ್ಮಟ ಮತ್ತಿತರ ಸ್ತಬ್ಧಚಿತ್ರಗಳು ಗಮನ ಸೆಳೆಯುತ್ತಿವೆ.

ಪ್ರವಾಹ ಸಂತ್ರಸ್ತರಿಗೆ ನೆರವು ಕಲ್ಪಿಸಲು ಎನ್‌ಸಿಸಿ ವತಿಯಿಂದ ನಡೆಯುವ ಸಾಹಸಮಯ ಕಾರ್ಯಗಳನ್ನು ಸ್ತಬ್ಧಚಿತ್ರಗಳ ಮೂಲಕ ಸಾದರಪಡಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ ಕಾಫಿಕನ್ಯೆ ಸ್ತಬ್ಧ ಚಿತ್ರದ ಪರಿಕಲ್ಪನೆ ಮನೋಹರ ವಾಗಿತ್ತು. ದಾವಣಗೆರೆಯ ಸ್ಮಾರ್ಟ್ ಸಿಟಿ ಸ್ತಬ್ಧಚಿತ್ರ ಗಮನಸೆಳೆಯುತ್ತಿವೆ.

ಇದರ ಮಧ್ಯೆ ಸಾಗುತ್ತಿರುವ ಜಾನಪದ ಕಲಾತಂಡಗಳು ಮೆರವಣಿಗೆರೆಗೆ ಮೆರುಗು ಹೆಚ್ಚಿಸಿವೆ.

ADVERTISEMENT
‘ವಿಶ್ವದ ಪ್ರಪ್ರಥಮ ಸಂಸತ್‌’ ಅನುಭವಮಂಟಪ, ಬಸವಲಕ್ಯಾಣ, ಬೀದರ್‌ ಜಿಲ್ಲಾ ಪಂಚಾಯ್ತಿಯಿಂದ ಪ್ರಸ್ತುತಿ
ಸ್ವಚ್ಛ ಭಾರತ ಅಭಿಯಾನದ ಪ್ರಸ್ತುತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.