ADVERTISEMENT

ಭಕ್ತಿ ಪಂಜರದಲ್ಲಿದ್ದರೆ ಕಾಯುವ ಭಗವಂತ

ವಚನಾಮೃತ

ಡಾ.ಅಲ್ಲಮಪ್ರಭು ಸ್ವಾಮೀಜಿ
Published 16 ಸೆಪ್ಟೆಂಬರ್ 2020, 8:16 IST
Last Updated 16 ಸೆಪ್ಟೆಂಬರ್ 2020, 8:16 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ//ಸಲಹುತ್ತ ಶಿವಶಿವ ಎಂದೋದಿಸಯ್ಯ//ಭಕ್ತಿ ಎಂಬ ಪಂಜರದೊಳಗಿಕ್ಕಿ//ಸಲಹು ಕೂಡಲ ಸಂಗಮದೇವಾ...

ಮಾನವರು ವಾಸಿಸುವ ಈ ಜಗತ್ತನ್ನು ಬಸವಣ್ಣನವರು ಅರಣ್ಯಕ್ಕೆ ಹೋಲಿಸಿದ್ದಾರೆ. ತಮ್ಮನ್ನು ತಾವು ಗಿಳಿಗೆ ಹೋಲಿಸಿಕೊಂಡಿದ್ದಾರೆ. ತಾನು ಸದಾಕಾಲ ಶಿವನ ನಾಮಸ್ಮರಣೆ ಮಾಡುವಂತೆ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಭಕ್ತಿ ಎಂಬ ಪಂಜರದೊಳಗೆ ಇರಿಸಿ ತನ್ನನ್ನು ಕಾಯುವಂತೆ ಹಂಬಲಿಸಿದ್ದಾರೆ. ಭಗವಂತನನ್ನು ಸದಾಕಾಲ ನಾವು ಸ್ಮರಿಸಬೇಕಾದರೆ ನಮ್ಮಲ್ಲಿ ಭಕ್ತಿಯು ಅತ್ಯವಶ್ಯವಾಗಿ ಬೇಕಾಗುತ್ತದೆ.

ಹೀಗೆ ಭಕ್ತಿ ಎಂಬ ಪಂಜರದೊಳಗೆ ಇದ್ದರೆ ದೇವರು ನಮ್ಮನ್ನು ಎಲ್ಲ ಕಾಲದಲ್ಲೂ ರಕ್ಷಿಸುತ್ತಾನೆ ಎನ್ನುವುದು ಅವರ ವಚನದ ಸಾರ. ಇದನ್ನು ನಾವೆಲ್ಲರೂ ಪಾಲಿಸೋಣ. ಆ ಭಗವಂತ ನೀಡುವ ಸುರಕ್ಷೆಯ ನೆರಳಲ್ಲಿರೋಣ. ಅದಕ್ಕಾಗಿ ಭಗವಂತನ ನಾಮಸ್ಮರಣೆ ಮಾಡೋಣ. ಇದರಿಂದ ಒಳಿತಲ್ಲದೆ ಮತ್ತೇನೂ ಆಗುವುದಿಲ್ಲ. ಭಕ್ತಿಯಿಂದ ಕಷ್ಟಗಳು ದೂರಾಗುತ್ತವೆ.

ADVERTISEMENT

(ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.