ADVERTISEMENT

ಆಟೊಗೆ ಬಸ್ ಡಿಕ್ಕಿ: ನಗರದ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 20:15 IST
Last Updated 23 ಫೆಬ್ರುವರಿ 2012, 20:15 IST

ಕುಣಿಗಲ್: ಆಟೊಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಕಲ್ಲೇಗೌಡನಪಾಳ್ಯ ಗೇಟ್ ಬಳಿ ಗುರುವಾರ ಸಂಭವಿಸಿದೆ. ಬೆಂಗಳೂರಿನ ಕುರುಬರಪಾಳ್ಯದ ಲೋಕೇಶ (35) ಮತ್ತು ಲೋಕೇಶ್ (28) ಮೃತಪಟ್ಟವರು.

ಇವರು ಆಟೊದಲ್ಲಿ ಸಿ.ಎಸ್.ಪುರಕ್ಕೆ ತೆರಳುತ್ತಿದ್ದರು. ಹಾಸನ ಕಡೆಯಿಂದ ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ರೇಖಾ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಬೆಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.