ಬೆಂಗಳೂರು: ಗಣಿ ಧಣಿಗಳಿಗೆ ಬಿಸಿ ಮುಟ್ಟಿಸಿರುವ ಬಳ್ಳಾರಿ ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಅವರ ವರ್ಗಾ ವಣೆಗೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
`ರಾಜಕೀಯ ವಿರೋಧಿಗಳಿ ಗಿಂತಲೂ ಈ ಅಧಿಕಾರಿಗಳು ಹೆಚ್ಚು ಅಪಾಯಕಾರಿ. ಹೀಗಾಗಿ ಅವರನ್ನು ಮೊದಲು ಎತ್ತಂಗಡಿ ಮಾಡಿ~ ಎನ್ನುವ ಬೇಡಿಕೆ ಬಿಜೆಪಿಯ ಗಣಿ ಧಣಿಗಳಿಂದ ಬಂದಿದೆ.
ಒತ್ತಡ ಹೆಚ್ಚಾಗುವ ವೇಳೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಬಂಧಿಸಿದೆ.
ಆ ನಂತರ ಮಾಜಿ ಸಚಿವ ಶ್ರೀರಾಮುಲು ಈ ಅಧಿಕಾರಿಗಳ ಎತ್ತಂಗಡಿಗೆ ಪಟ್ಟು ಹಿಡಿದಿದ್ದು, ಅವರನ್ನು ವರ್ಗಾವಣೆ ಮಾಡದಿದ್ದರೆ ಬಿಜೆಪಿಗೆ ವಿದಾಯ ಹೇಳುವ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.