ADVERTISEMENT

ನನ್ನ ಮತ ಹಾಕಿದ್ದು ಅಂಜನಾಮೂರ್ತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST

ಬೇಲೂರು: `ವಿಧಾನ ಪರಿಷತ್ತಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ನನ್ನ ಮತ ತಿರಸ್ಕೃತವಾಗಲು ಮಾಜಿ ಶಾಸಕ ಅಂಜನಾಮೂರ್ತಿ ಕಾರಣ~ ಎಂದು ಬೇಲೂರು ಶಾಸಕ ರುದ್ರೇಶಗೌಡ ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, `ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಮತ ಚಲಾವಣೆಗೆ ನನಗೆ ಸಹಾಯಕರನ್ನಾಗಿ ಮಾಜಿ ಶಾಸಕ ಅಂಜನಾಮೂರ್ತಿ ಅವರನ್ನು  ಕಳುಹಿಸಿದ್ದರು. ನನ್ನ ಪರವಾಗಿ ಅವರೇ ಮತ ಚಲಾವಣೆ ಮಾಡಿದ್ದಾರೆ.  ಮತ ತಿರಸ್ಕಾರಗೊಂಡಿರುವುದಕ್ಕೆ ಅವರೇ ಹೊಣೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.