ADVERTISEMENT

ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರ ಧರಣಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಹೊಳೆನರಸೀಪುರ: ಭೂಮಿಗೆ ಪರಿಹಾರ ನೀಡಲು ಆಗ್ರಹಿಸಿ ಹಳೇಕೋಟೆ ಹೋಬಳಿಯ ಸಿಗರನಹಳ್ಳಿ ಗ್ರಾಮದ ಜನತೆ ಮಂಗಳವಾರ ಸುಜಲಾನ್ ವಿಂಡ್ ಫ್ಯಾನ್ ಕಂಪನಿಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈಗಾಗಲೇ ಸುತ್ತಲ ಗ್ರಾಮಗಳಲ್ಲಿ 10ಕ್ಕೂ ಹೆಚ್ಚು ಫ್ಯಾನ್ ಅಳವಡಿಸಿದ್ದು, ಇನ್ನೊಂದು ತಿಂಗಳಲ್ಲಿ ಇವರು ಜಾಗ ಖಾಲಿ ಮಾಡುವುದು ಖಚಿತ. ಇದರಿಂದ ಸಾಕಷ್ಟು ತೊಂದರೆ ಈಗಾಗಲೇ ಆಗಿದೆ. ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯ್ತಿ ಸದಸ್ಯ ಲೊಕೇಶ್, ಕಂಪನಿಯು ಕೆಲಸ ಆರಂಭಿಸುವಾಗ ಪರಿಹಾರ ನೀಡುವ ಭರವಸೆ ನೀಡಿತ್ತು. ಆದ್ದರಿಂದ ಬೆಟ್ಟದ ಮೇಲೆ ಉಳುಮೆ ಮಾಡುತ್ತಿದ್ದ ದರಕಾಸ್ತು ಜಮೀನು ಮತ್ತು ಗೋಮಾಳ ಜಮೀನು ಬಿಟ್ಟು ಕೊಟ್ಟೆವು. ಆದರೆ, ಈ ಕಂಪನಿಯರು ಇದುವರೆವಿಗೂ ಪರಿಹಾರವನ್ನೇ ನೀಡಿಲ್ಲ. ಅಂದಿನಿಂದ ಇಂದಿನವರೆಗೆ ದಿನ ದೂಡುತ್ತಲೇ ಇದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.