ADVERTISEMENT

ಯಾದಗಿರಿ: ನಾಲೆಗೆ ಕಾರು ಉರುಳಿ ಐವರ ಸಾವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 9:00 IST
Last Updated 21 ಅಕ್ಟೋಬರ್ 2011, 9:00 IST

ಯಾದಗಿರಿ: ಸಮೀಪದ ಶಹಾಪುರದ ಮಡಬೋಳದ ಬಳಿಯ ಜೇವರ್ಗಿ ಮುಖ್ಯ ಕಾಲುವೆಗೆ ಶುಕ್ರವಾರ ಬೆಳಿಗ್ಗೆ ಕಾರೊಂದು ಉರುಳಿ ಚಾಲಕ ಸೇರಿದಂತೆ ಐದು ಜನರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟವರನ್ನು ರಾಮರಾವ್ (35), ಪ್ರಕಾಶ್ ರಾವ್ (35), ಲಲಿತಾ (34), ಜ್ಯೋತಿ (18) ಹಾಗೂ ಚಾಲಕನನ್ನು ವಿಠಲ್ ರಾವ್ ಎಂದು ಗುರುತಿಸಲಾಗಿದ್ದು, ಇವರು ಆಂಧ್ರಪ್ರದೇಶದ ಮೇಡಕ್ ಜಿಲ್ಲೆಗೆ ಸೇರಿದವರು ಎನ್ನಲಾಗಿದೆ.

ಇವರು ಗುಲ್ಬರ್ಗದಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಮೇಡಕ್ ಜಿಲ್ಲೆಗೆ ಮರಳುವಾಗ ಈ ದುರ್ಘಟನೆ ಜರುಗಿದೆ ಎಂದು ಮೂಲಗಳ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT