ADVERTISEMENT

ಕೂಡಲಸಂಗಮದಲ್ಲಿ ಪುಣ್ಯಸ್ನಾನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 7:15 IST
Last Updated 14 ಆಗಸ್ಟ್ 2012, 7:15 IST

ಕೂಡಲಸಂಗಮ: ಕೂಡಲಸಂಗಮ ಅಣ್ಣ ಬಸವಣ್ಣನ ತಪೋಭೂಮಿ, ತ್ರಿವೇಣಿ ಸಂಗಮದ ನಾಡು, ಮಲಪ್ರಭಾ , ಕೃಷ್ಣಾ ನದಿಯ ಸಂಗಮ ಸ್ಥಾನ ಹೀಗಾಗಿ ಪ್ರತಿ ವರ್ಷ ಶ್ರಾವಣನ ಕೊನೆಯ ಸೋಮವಾರ ಇಲ್ಲಿಗೆ ಪ್ರವಾಸಿಗರ, ಭಕ್ತರ ದಂಡೆ ಆಗಮಿಸುತ್ತದೆ.

ವಿಶೇಷವಾಗಿ ಶ್ರಾವಣದ ಕೊನೆಯ ಸೋಮವಾರದ ಪರ್ವಕಾಲದಲ್ಲಿ ಕುಟುಂಬ ಸಮೇತವಾಗಿ ಜನರು ಇಲ್ಲಿಗೆ ಆಗಮಿಸಿದ್ದರು. ತ್ರಿವೇಣಿ ಸಂಗಮದಲ್ಲಿ ಮಿಂದು ಪುಣ್ಯ ಸ್ನಾನ ಮಾಡಿ ಶ್ರಾವಣವನ್ನು  ಸಂಭ್ರಮದಿಂದ ಆಚರಿಸಿದರು.

ತ್ರಿವೇಣಿ ಸಂಗಮದಲ್ಲಿ ಮಿಂದು ಪುಣ್ಯ ಸ್ನಾನ ಮಾಡಿದ ನಂತರದಲ್ಲಿ ಪ್ರವಾಸಿಗರು ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ವಿಶೇಷವಾಗಿ ಬಸವಣ್ಣನವರ ಐಕ್ಯ ಸ್ಥಳಕ್ಕೆ ಬಂದು ಕೆಲ ಕಾಲ ಧ್ಯಾನಸ್ಥರಾಗಿದ್ದು ಕಂಡು ಬಂದಿತು. ನಂತರ ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ, ಲಿಂಗಪೂಜೆ ಮಾಡಿಕೊಂಡು ಸಾಮೂಹಿಕ ಭೋಜನ ಸೇವಿಸಿದರು.

ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಸೋಮವಾರ ಮುಂಜಾನೆ ಸೂರ್ಯೋದಯವಾಗುತ್ತಲೇ ನದಿಯಲ್ಲಿ ಸ್ನಾನ ಮಾಡಿದರು. ಸ್ನಾನ, ಪೂಜೆಯ ನಂತರ ಸ್ವಚ್ಛತಾ ಸೇವೆಯನ್ನೂ ಸಲ್ಲಿಸಿದರು. ಉಳ್ಳವರು ಶ್ರೀಕ್ಷೇತ್ರದ ಬಡವರಿಗೆ ದಾನ, ಪ್ರಸಾದ ಸೇವೆ ಕೈಗೊಂಡರು. ಹಿರಿಯರಿಗೆ ಭಕ್ತಿ ನಮನ ಸಲ್ಲಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.