ADVERTISEMENT

ಬಾದಾಮಿಗೆ ಯಡಿಯೂರಪ್ಪ ಭೇಟಿ 6ಕ್ಕೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 5:18 IST
Last Updated 4 ಅಕ್ಟೋಬರ್ 2017, 5:18 IST
ಬಾದಾಮಿಗೆ ಯಡಿಯೂರಪ್ಪ ಭೇಟಿ 6ಕ್ಕೆ
ಬಾದಾಮಿಗೆ ಯಡಿಯೂರಪ್ಪ ಭೇಟಿ 6ಕ್ಕೆ   

ಬಾದಾಮಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಇದೇ 6ರಂದು ಭೇಟಿ ನೀಡಲಿದ್ದು, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮಹಾಂತೇಶ ಮಮದಾಪುರ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮುಖಂಡ ಸಿದ್ದಣ್ಣ ಶಿವನಗುತ್ತಿ ಹೇಳಿದರು.

ನಗರದಲ್ಲಿ ಮಂಗಳವಾರತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಅಂದು ಸಂಜೆ 6 ಗಂಟೆಗೆ ಬರಲಿರುವ ಮಮದಾಪುರ ಮಮದಾಪುರ ಅವರ 51 ನೇ ಹುಟ್ಟುಹಬ್ಬ ಸಮಾರಂಭದ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಇಲ್ಲಿನ ಮಮದಾಪುರ ಕಲ್ಯಾಣ ಮಂಟಪದ ಆವರಣದಲ್ಲಿ ಮಹಾಂತೇಶ ಅವರ ಅಭಿಮಾನಿ ಬಳಗವು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದೆ. ಅಂದು ಬೆಳಿಗ್ಗೆ ನೇತ್ರ ತಪಾಸಣೆ ಮತ್ತು ಚಿಕಿತ್ಸೆ, ರಕ್ತದಾನ ಶಿಬಿರ ಮತ್ತು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಶಿವು ಗಂಗಾಲ ಹೇಳಿದರು.

ADVERTISEMENT

ಸಮಾರಂಭದಲ್ಲಿ ಕಮತಗಿ ಹೋಳೆಹುಚ್ಚೇಶ್ವರ ಶ್ರೀಗಳು, ಡಾ. ಶಿವಕುಮಾರ ಶ್ರೀಗಳು, ಸಂಸದ ಪಿ.ಸಿ. ಗದ್ದಿಗೌಡರ ಹಾಗೂ ಜಿಲ್ಲೆಯ ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮುತ್ತಣ್ಣ ಕಳ್ಳಿಗುಡ್ಡ, ಉಮೇಶ ಹಕ್ಕಿ, ಅಡಿವೆಪ್ಪ ಢಾಣಕಶಿರೂರ, ಹೊನ್ನಯ್ಯ ಹಿರೇಮಠ, ಬಸವರಾಜ ಪಾಟೀಲ, ಬಸವರಾಜ ತೀರ್ಥಪ್ಪನವರ, ಗುರುಸಿದ್ದಯ್ಯ ಹಿರೇಮಠ, ಮಲ್ಲಣ್ಣ ಸಂಕದಾಳ, ಬಸವರಾಜ ಸುಂಕದ, ಶಂಕ್ರಪ್ಪ ಗಾಣಿಗೇರ, ನದಾಫ ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.