ರಬಕವಿ ಬನಹಟ್ಟಿ: ಸ್ಥಳೀಯ ಘಟ್ಟಗಿ ಬಸವೇಶ್ವರರ ಜಾತ್ರೆಯು ದೀಪಾವಳಿ ಕಡೆಪಾಡ್ಯೆ ದಿನವಾದ ಬುಧವಾರ ನಡೆಯಿತು. ಸಂಜೆ ರಥೋತ್ಸವದ ಸಂದರ್ಭದಲ್ಲಿ ಭಕ್ತರು ಸಾವಿರಾರು ರೂಪಾಯಿ ಮೊತ್ತದ ಮದ್ದು ಸುಡುವುದರ ಮೂಲಕ ತಮ್ಮ ಹರಕೆ ಪೂರೈಸಿದರು.
ರಥೋತ್ಸವವು ದೇವಸ್ಥಾನದಿಂದ ಆರಂಭವಾಗಿ ಹೊಸಪೇಟೆ ಲೇನ್, ಈಶ್ವರ ಸಣಕಲ್ ರಸ್ತೆ ಮೂಲಕ ಹಾಯ್ದು ಶಂಕರಲಿಂಗ ದೇವಸ್ಥಾನ ಆವರಣದಲ್ಲಿ ಬಂದು ನಿಂತಿತು. ಅಲ್ಲಿ ಭಕ್ತರು ದರ್ಶನ ಪಡೆದ ನಂತರ ಮತ್ತೆ ದೇವಸ್ಥಾನಕ್ಕೆ ಮರಳಿತು.
ಈ ಸಂದರ್ಭದಲ್ಲಿ ಮುತ್ತೈದೆಯರು ರಥಕ್ಕೆ ಆರತಿ ಮಾಡಿದರು. ರಥಕ್ಕೆ ಉತ್ತತ್ತಿಗಳನ್ನು ಎಸೆದರು. ಕರಡಿ ವಾದನ ಮತ್ತ ಕೈ ದಪ್ಪಿನ ತಂಡದವರ ಪ್ರದರ್ಶನ ಗಮನ ಸೆಳೆಯಿತು. ಜಾತ್ರೆಯ ನಿಮಿತ್ತವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ ಮುತ್ತೈದೆಯರಿಗೆ ಉಡಿ ತುಂಬುವ ಜೊತೆಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಮಲ್ಲಿಕಾರ್ಜುನ ನಾಶಿ, ಶಿವಾನಂದ ಬಾಗಲಕೋಟಮಠ, ಚಿದಾನಂದ ಸೊಲ್ಲಾಪೂರ, ಸುರೇಶ ಗೊಳಸಂಗಿ, ಬಸವರಾಜ ಮಟ್ಟಿಕಲ್ಲಿ, ಬಸವರಾಜ ಜವಾರಿ, ಬಸವರಾಜ ತೆಗ್ಗಿ, ಈರಣ್ಣ ಗುಣಕಿ, ಈಶ್ವರ ನಾಗರಾಳ, ರವಿ ಶಿರಗಾರ, ಬಾಲಚಂದ್ರ ಉಮದಿ, ಬಸವರಾಜ ಭಿಲವಡಿ, ಸಂಜಯ ತೆಗ್ಗಿ, ಬಸವರಾಜ ಜುವಾರಿ, ನೀಲಕಂಠ ಮುತ್ತೂರ, ಗಣಪತರಾವ ಹಜಾರೆ, ಪ್ರವೀಣ ಹಜರೆ, ರವಿ ಮುರಗೋಡ, ಶ್ರೀಶೈಲ ಭಿಲವಡಿ, ವಿನಾಯಕ ಶೇಗುಣಸಿ, ವಿಜಯ ನಾಶಿ, ಉದಯ ಜಿಗಜಿನ್ನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.