ADVERTISEMENT

ಅಮೀನಗಡ: ವಿವಿಧೆಡೆ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 17:22 IST
Last Updated 18 ಜೂನ್ 2021, 17:22 IST
ಅಮೀನಗಡ ಸಮೀಪದ ಕೆಲೂರ ಗ್ರಾಮದ ಗುರು ಮಂಟೇಶ್ವರ ತೀರ್ಥ ಹೊಂಡವು ತುಂಬಿ ಹರಿಯುತ್ತಿದೆ
ಅಮೀನಗಡ ಸಮೀಪದ ಕೆಲೂರ ಗ್ರಾಮದ ಗುರು ಮಂಟೇಶ್ವರ ತೀರ್ಥ ಹೊಂಡವು ತುಂಬಿ ಹರಿಯುತ್ತಿದೆ   

ಅಮೀನಗಡ: ಸತತ ಮೂರು ದಿನಗಳಿಂದ ಮುಂಗಾರು ಮಳೆ ಸುರಿಯುತ್ತಿದೆ. ಅಮೀನಗಡ ಪಟ್ಟಣ ಸೇರಿದಂತೆ ಗುಡೂರು, ಐಹೊಳೆ, ಸೂಳೆಬಾವಿ ಹಾಗೂ ಕಮತಗಿ ಗ್ರಾಮಗಳಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದೆ.

ಧಾರಾಕಾರ ಮಳೆಯಾಗುತ್ತಿರುವುದರಿಂದ ರೈತಾಪಿ ವರ್ಗ ಸಂತಸಗೊಂಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹೊಲ ಗದ್ದೆಗಳಲ್ಲಿ ನೀರು ನಿಂತಿದ್ದು ಕೃಷಿ ಹೊಂಡಗಳು ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಸತತ ಮಳೆಯಿಂದಾಗಿ ಹಳ್ಳ ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚುತ್ತಿರುವುದು ರೈತರಿಗೆ ಖುಷಿ ನೀಡಿದೆ.

ಮಳೆ ಉತ್ತಮವಾಗಿ ಬರುತ್ತಿರುವುದರಿಂದ ಹೊಲದಲ್ಲಿ ಕೃಷಿ ಹೊಂಡಗಳು ತುಂಬುತ್ತಿವೆ. ಮತ್ತು ಕೃಷಿ ಚಟುವಟಿಕೆಗಾಗಿ ಮಣ್ಣು ಫಲವತ್ತಾಗಿ ಸಿದ್ಧವಾಗಿದೆ ಎಂದು ರೈತ ರಮೇಶ ಭಗವತಿ ಹೇಳಿದರು.

ADVERTISEMENT

ಅಮೀನಗಡ ಹೋಬಳಿಯಲ್ಲಿರುವ ಕೆರೆಗಳಿಗೆ ನೀರು ಬರುತ್ತಿದ್ದು ಕೆಲವು ಕೆರೆಗಳು ತುಂಬಿ ಹರಿಯುತ್ತಿವೆ. ಅಮೀನಗಡ ಸಮೀಪದ ಕೆಲೂರ ಗ್ರಾಮದಲ್ಲಿರುವ ಹೊಂಡ ತುಂಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.