ADVERTISEMENT

ಬಿಜೆಪಿ ಸಾಧನೆಗಳ ಕೈಪಿಡಿ ವಿತರಣೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 15:17 IST
Last Updated 30 ಜುಲೈ 2023, 15:17 IST
 ತೇರದಾಳ ಪಟ್ಟಣದಲ್ಲಿ ಶಾಸಕ ಸಿದ್ದು ಸವದಿ ಅವರು ಕಾರ್ಯಕರ್ತರೊಂದಿಗೆ ಮನೆಮನೆಗೆ ಬಿಜೆಪಿ ಸಾಧನೆಗಳ ಕೈಪಿಡಿ ವಿತರಿಸಿದರು
 ತೇರದಾಳ ಪಟ್ಟಣದಲ್ಲಿ ಶಾಸಕ ಸಿದ್ದು ಸವದಿ ಅವರು ಕಾರ್ಯಕರ್ತರೊಂದಿಗೆ ಮನೆಮನೆಗೆ ಬಿಜೆಪಿ ಸಾಧನೆಗಳ ಕೈಪಿಡಿ ವಿತರಿಸಿದರು   

ತೇರದಾಳ: ‘ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಪ್ರಧಾನಿ ಮೋದಿ ಅವರ ಶ್ರಮ ಅವಿರತವಾದ್ದದ್ದು’ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ 9 ವರ್ಷ ಮಾಡಿದ ಸಾಧನೆಗಳ ಕೈಪಿಡಿ ಬಿಡುಗಡೆ ಹಾಗೂ ಕರಪತ್ರ ವಿತರಿಸಿ ಅವರು ಮಾತನಾಡಿದರು.

‘ದೇಶದಲ್ಲಿ 70 ವರ್ಷಗಳಲ್ಲಿ ಆಗದ ಬಹಳಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರೇ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬುದು ದೇಶವಾಸಿಗಳ ಆಶಯವಾಗಿದೆ’ ಎಂದರು.

ADVERTISEMENT

 ಪಟ್ಟಣದ ಹಲವು ಮನೆಗಳಿಗೆ ತೆರಳಿ ಕರಪತ್ರ ವಿತರಿಸಲಾಯಿತು. ಪಕ್ಷದ ಗ್ರಾಮೀಣ ಮಂಡಲದ ಅಧ್ಯಕ್ಷ ಸುರೇಶ ಅಕಿವಾಟ, ನಗರ ಘಟಕದ ಪ್ರಭಾರಿ ಅಧ್ಯಕ್ಷ ರಾಮಣ್ಣ ಹಿಡಕಲ್, ಪಕ್ಷದ ಪ್ರಮುಖರಾದ ಪ್ರಭಾಕರ ಬಾಗಿ, ಸಿದ್ದು ಅಮ್ಮಣಗಿ, ನಿಂಗಪ್ಪ ಮಾಲಗಾಂವಿ, ಕಾಶೀನಾಥ ರಾಠೋಡ, ಸಂತೋಷ ಜಮಖಂಡಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.