ADVERTISEMENT

ಧಾರಾಕಾರ ಮಳೆ: ರೈತರ ಮೊಗದಲ್ಲಿ ಕಳೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 14:38 IST
Last Updated 20 ಜುಲೈ 2023, 14:38 IST

ಕುಳಗೇರಿ ಕ್ರಾಸ್: ಕುಳಗೇರಿ ಹೋಬಳಿಯ ಸುತ್ತಮುತ್ತಲೀನ ಗ್ರಾಮಗಳಲ್ಲಿ ಗುರುವಾರ ಮಧ್ಯಾಹ್ನ ಒಂದೂವರೆ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಬಿತ್ತನೆಗೆ ಕಾದು ಕುಳಿತಿದ್ದ ರೈತರ ಮೊಗದಲ್ಲಿ ಮಳೆ ಮಂದಹಾಸ ಮೂಡಿಸಿದೆ.

ಹೋಬಳಿಯ ನೀರಲಕೇರಿ ಗ್ರಾಮದಲ್ಲಿ ಭರಮಗೌಡರ ಮನೆಯ ಚಾವಣಿ ಕುಸಿದು ಬಿದ್ದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಥಳಕ್ಕೆ ಭೇಟಿ ನೀಡದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಭರಮಗೌಡ ಆಕ್ರೋಶ ವ್ಯಕ್ತಪಡಿಸಿದರು.

ಧಾರಾಕಾರ ಮಳೆಯಿಂದ ಬಹುತೇಕ ರೈತರು ಈ ವಾರಾಂತ್ಯದಲ್ಲಿ ನಿರೀಕ್ಷೆಗೂ ಮೀರಿ ಬರಡು ಬಿದ್ದ ಭೂಮಿಗಳನ್ನು ಹದ ಮಾಡಿ ಬಿತ್ತನೆ ಮಾಡಿದ ಬಹುತೇಕ ರೈತರು ಈ ಮಳೆ ಆಕಾಶಕ್ಕೆ ಭರ್ಚೆ ಹಾಕುವ ಕಾಲ ಬಂದಿತೆನಪ್ಪ ಈ ವರ್ಷ ಇಂತಃ ಮಳೆಯನ್ನು ಕಾಣುತ್ತೆದ್ದೆವಿಲ್ಲಪಾ ಎಂದು ಬಹಳಷ್ಟು ರೈತರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.