ADVERTISEMENT

ಜೆ.ಕೆ.ಸಿಮೆಂಟ್ಸ್‌ಗೆ ಐದು ರಾಷ್ಟ್ರೀಯ ಪ್ರಶಸ್ತಿ ಗರಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 12:47 IST
Last Updated 29 ಆಗಸ್ಟ್ 2020, 12:47 IST
ಮುಧೋಳ ತಾಲ್ಲೂಕು ಮುದ್ದಾಪುರದ ಜೆ.ಕೆ.ಸಿಮೆಂಟ್ ಫ್ಯಾಕ್ಟರಿ
ಮುಧೋಳ ತಾಲ್ಲೂಕು ಮುದ್ದಾಪುರದ ಜೆ.ಕೆ.ಸಿಮೆಂಟ್ ಫ್ಯಾಕ್ಟರಿ   

ಬಾಗಲಕೋಟೆ: ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ನಡೆಸಿದ 21ನೇ ರಾಷ್ಟ್ರೀಯ ಇಂಧನ ನಿರ್ವಹಣಾ ಸ್ಪರ್ಧೆಯಲ್ಲಿಮುಧೋಳ ತಾಲ್ಲೂಕಿನ ಮುದ್ದಾಪುರದ ಜೆ.ಕೆ.ಸಿಮೆಂಟ್ ವರ್ಕ್ಸ್‌ಗೆ‌ ಐದು ರಾಷ್ಟ್ರೀಯ ಪ್ರಶಸ್ತಿ ದೊರೆತಿವೆ.

ದೇಶದ ಅಟೊಮೊಬೈಲ್, ಸಿಮೆಂಟ್, ಸ್ಟೀಲ್, ಐಟಿ, ಸಕ್ಕರೆ ವಲಯದ 375 ಕಂಪೆನಿ ಭಾಗವಹಿಸಿದ್ದವು. ಅಂತಿಮ ಸುತ್ತಿಗೆ 21 ಸಿಮೆಂಟ್ ಕಂಪೆನಿಗಳು ಆಯ್ಕೆಯಾಗಿದ್ದವು.

ಇಂಧನ ದಕ್ಷತೆಯ ಘಟಕ ಪ್ರಶಸ್ತಿ, ಇಂಧನ ದಕ್ಷತೆಯಲ್ಲಿ ರಾಷ್ಟ್ರೀಯ ನಾಯಕ ಪ್ರಶಸ್ತಿ, ನವೀನ ಯೋಜನೆ ಪ್ರಶಸ್ತಿ, ಇಂಧನ ದಕ್ಷ ಘಟಕ ಪ್ರಶಸ್ತಿ (ಸಿಪಿಸಿ) ಹಾಗೂ ಇಂಧನ ದಕ್ಷತೆಯಲ್ಲಿ ಯುವ ಹಾಗೂ ಉದಯೋನ್ಮುಖ ಪ್ರಶಸ್ತಿಗೆ ಸಂಸ್ಥೆ ಭಾಜನವಾಗಿದೆ ಎಂದುಜೆ.ಕೆ.ಸಿಮೆಂಟ್ ವರ್ಕ್ಸ್ಮುಖ್ಯಸ್ಥ ಆರ್.ಬಿ.ಎಂ.ತ್ರಿಪಾಠಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.