ADVERTISEMENT

‘ಗ್ಯಾರಂಟಿ’ ಅನುಷ್ಠಾನ ಸಮಿತಿಗೆ ನೇಮಕ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 14:15 IST
Last Updated 27 ಮಾರ್ಚ್ 2024, 14:15 IST
ಬಲವಂತಗೌಡ ಪಾಟೀಲ
ಬಲವಂತಗೌಡ ಪಾಟೀಲ   

ಮಹಾಲಿಂಗಪುರ: ರಬಕವಿ-ಬನಹಟ್ಟಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಪಟ್ಟಣದ ಬಲವಂತಗೌಡ ಪಾಟೀಲ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ರಬಕವಿಯ ಸಾಗರ ಹೊಸಮನಿ, ಶಂಕರ ಹಿಪ್ಪರಗಿ, ನಾವಲಗಿಯ ವಿಶ್ವನಾಥ ಬಡಚಿ, ಹನಗಂಡಿಯ ಮಲ್ಲನಗೌಡ ಪಾಟೀಲ, ಬನಹಟ್ಟಿಯ ರೇಣುಕಾ ಮಡ್ಡಮನಿ, ಮಹಿಬೂಬ ನದಾಫ್, ಸಸಾಲಟ್ಟಿಯ ಪ್ರಕಾಶ ಉಳ್ಳಾಗಡ್ಡಿ, ಚಿಮ್ಮಡದ ಪ್ರವೀಣ ಪೂಜಾರ, ರವಿ ದೊಡವಾಡ, ತೇರದಾಳದ ಅಶೋಕ ಹಾಡಕರ, ಮಧುರಖಂಡಿಯ ಕೃಷ್ಣ ಬೆಳಗಲಿ, ಬಂಡಿಗಣಿಯ ನಂದಿಕೇಶ್ವರ ಮಠದ, ಮದಭಾವಿಯ ಸೀತಾ ಫಕೀರಪ್ಪ ವಗ್ಗರ, ಮಹಾಲಿಂಗಪುರದ ಹೊಳೆಪ್ಪ ನಾಗಪ್ಪ ಬಾಡಗಿ ಅವರನ್ನು ಸದಸ್ಯರನ್ನಾಗಿ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT