ಬಾಗಲಕೋಟೆ: ಜಿಲ್ಲಾಧಿಕಾರಿಯಾದ ನೀನು ಸಾರ್ವಜನಿಕರ ಸೇವಕ. ನನ್ನ ಕೇಳದೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹೇಗೆ ಹಾಕಿದೆ? ಇವರಿಗೆಲ್ಲ ಯಾರ್ರಿ ಕೆಲಸ ಕೊಟ್ಟವರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಾಗಲಕೋಟೆ ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜೂನ್ 21 ರಂದು ಪಟ್ಟದಕಲ್ಲಿನಲ್ಲಿ ಆಯೋಜಿಸಿರುವ ವಿಶ್ವ ಯೋಗ ದಿನ ಆಚರಣೆ ಕಾರ್ಯಕ್ರಮ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿದ್ದಕ್ಕೆ ಮೊಬೈಲ್ ಗೆ ಕರೆ ಮಾಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಆಕಾಶಕ್ಕೆ ಹೋಗಿದ್ದೀರಿ. ಕೊಬ್ಬಿಕೊಂಡಿದ್ದೀರಿ. ಅವನ್ಯಾವನೋ ಚಂದ್ರಶೇಖರ ಅಂತ ಬರತಾನೆ. ಕ್ಷೇತ್ರಕ್ಕೂ ಅವನಿಗೂ ಸಂಬಂಧ ಇಲ್ಲ. ನಾನು ಹೋಗಲ್ಲ. ಆಗ ಜನ ಏನು ಅಂದುಕೊಳ್ಳುತ್ತಾರೆ ಎಂದಿದ್ದಾರೆ.
ಹುಡುಗಾಟ ಆಗಿದೆ. ಆಕಾಶದಿಂದ ಬಂದವನಾ? ಅವನೊಬ್ಬ ಜಿಲ್ಲಾ ಮಟ್ಟದ ಅಧಿಕಾರಿ. ದೇವಲೋಕದಿಂದ ಬಂದಿದ್ದಾನಾ? ಬ್ರಿಟಿಷರ ಕಾಲಕ್ಕೆ ಕಲೆಕ್ಟರ್ ಅನ್ನುವುದು ಹೋಯಿತು ಎಂದು ಬೆಂಬಲಿಗರ ಮುಂದೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.