ಸತೀಶ ಜಾರಕಿಹೊಳಿ
ಮಹಾಲಿಂಗಪುರ (ಬಾಗಲಕೋಟೆ): ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸದ್ಯಕ್ಕಿಲ್ಲ. ಪೂರಕ ವಾತಾವರಣ ನಿರ್ಮಾಣವಾದ ಬಳಿಕ ವರಿಷ್ಠರು ತೀರ್ಮಾನಿಸುವರು. ನಾನೂ ಸೇರಿ ಹಲವರು ಪೈಪೋಟಿಯಲ್ಲಿ ಇದ್ದಾರೆ. ಸೂಕ್ತ ಕಾಲ ಕೂಡಿ ಬರಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
‘ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಆಗಾಗ್ಗೆ ಎಲ್ಲ ಸರ್ಕಾರಗಳು ಕ್ರಮ ಕೈಗೊಂಡಿವೆ. ಅದಕ್ಕೆ ಬಿಜೆಪಿ ಪ್ರತಿಭಟಿಸುವುದು ಸರಿಯಲ್ಲ. ರೈತರ ಹಿತದೃಷ್ಟಿಯಿಂದ ಹಾಲಿನ ಬೆಲೆ ಏರಿಕೆ ಮಾಡಲಾಗಿದೆ ಎಂಬುದನ್ನು ಸರ್ಕಾರ ಈಗಾಗಲೇ ತಿಳಿಸಿದೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.