ADVERTISEMENT

ಮಾರಿಹಾಳ ಕೆರೆಗೆ ಬಾಗಿನ ಅರ್ಪಿಸಿದ ಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 14:40 IST
Last Updated 11 ಆಗಸ್ಟ್ 2019, 14:40 IST
ಬೆಳಗಾವಿ ತಾಲ್ಲೂಕಿನ ಮಾರಿಹಾಳದಲ್ಲಿ 47 ವರ್ಷಗಳ ನಂತರ ತುಂಬಿರುವ ಕೆರೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಬಾಗಿನ ಅರ್ಪಿಸಿ ನಮಿಸಿದರು
ಬೆಳಗಾವಿ ತಾಲ್ಲೂಕಿನ ಮಾರಿಹಾಳದಲ್ಲಿ 47 ವರ್ಷಗಳ ನಂತರ ತುಂಬಿರುವ ಕೆರೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಬಾಗಿನ ಅರ್ಪಿಸಿ ನಮಿಸಿದರು   

ಬೆಳಗಾವಿ: ಬರೋಬ್ಬರಿ 47 ವರ್ಷಗಳ ನಂತರ ತುಂಬಿದ ತಾಲ್ಲೂಕಿನ ಮಾರಿಹಾಳ ಕೆರೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಬಾಗಿನ ಅರ್ಪಿಸಿದರು.

ಬೈಕ್‌ನಲ್ಲಿ ಹಲಗಾ, ಬಸ್ತವಾಡ, ಕಮಕಾರಟ್ಟಿ, ಕೊಂಡಸಕೊಪ್ಪ, ಮಾರಿಹಾಳ ಗ್ರಾಮಗಳಿಗೆ ತೆರಳಿದ ಅವರು ‌ಮನೆ, ಬೆಳೆ, ಬಟ್ಟೆ, ಸಾಮಗ್ರಿಗಳನ್ನು ಕಳೆದುಕೊಂಡವರನ್ನು ಭೇಟಿಯಾಗಿ ಸಂತೈಸಿದರು. ಅನೇಕ ಕಡೆ ಕಾರು ಹೋಗಲಾಗದ ಸ್ಥಿತಿ ಇರುವುದರಿಂದ ಬೈಕ್‌ನಲ್ಲಿ ಸಂಚರಿಸಿದರು.

ಕ್ಷೇತ್ರದಲ್ಲಿ ಮಳೆಯಿಂದ ಆದ ನಷ್ಟದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವಿವರ ಸಿದ್ಧಪಡಿಸಿ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಯತ್ನಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.