ADVERTISEMENT

ಬಳ್ಳಾರಿ | ಆಫ್ರಿನ್‌ ಬಾನು ಪಾಲಿಕೆ ನೂತನ ಆಯುಕ್ತೆ

ವಿಎಸ್‌ಕೆಯು ಕುಲಸಚಿವ ಎಸ್‌.ಎನ್‌ ರುದ್ರೇಶ್‌ ವರ್ಗ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 15:29 IST
Last Updated 23 ಜೂನ್ 2025, 15:29 IST
ಸಯಿದಾ ಆಫ್ರಿನ್‌ ಬಾನು 
ಸಯಿದಾ ಆಫ್ರಿನ್‌ ಬಾನು    

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಆಯುಕ್ತರನ್ನಾಗಿ ಕೆಎಎಸ್‌ ಹಿರಿಯ ಶ್ರೇಣಿಯ ಅಧಿಕಾರಿ ಸಯೀದಾ ಆಫ್ರೀನ್‌ ಬಾನು ಬಳ್ಳಾರಿ ಅವರನ್ನು ನಿಯೋಜಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.  

ಆಫ್ರೀನ್‌ ಬಾನು ಅವರು ಸದ್ಯ ಬೆಳಗಾವಿಯ ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಹಾಲಿ ಆಯುಕ್ತರಾಗಿದ್ದ ಖಲೀಲ್‌ ಸಾಬ್‌ ಅವರಿಗೆ ಯಾವುದೇ ಹುದ್ದೆ ತೋರಿಸದೇ ವರ್ಗಾಯಿಸಲಾಗಿದೆ. 

ಪಾಲಿಕೆಯ ಆಯುಕ್ತರ ಹುದ್ದೆಗೆ ಹಲವರ ಹೆಸರುಗಳು ಕೇಳಿ ಬಂದಿದ್ದವು. ಅಂತಿಮಾಗಿ ಆಫ್ರಿನ್‌ ಬಾನು ಅವರನ್ನು ಸರ್ಕಾರ ನಿಯೋಜಿಸಿದೆ. 

ADVERTISEMENT

ಕುಲಸಚಿವ ರುದ್ರೇಶ್‌ ವರ್ಗ 

ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಎಸ್‌.ಎನ್‌ ರುದ್ರೇಶ್‌ (ಕೆಎಸ್‌ಎಸ್‌ ಸೂಪರ್‌ ಟೈಂ ಸ್ಕೇಲ್‌) ಅವರನ್ನು ಧಾರವಾಡದಲ್ಲಿರುವ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಆಡಳಿತಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ರುದ್ರೇಶ್‌ ಅವರು ಈ ಹಿಂದೆ ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು. 

ಅವರಿಂದ ತೆರವಾಗಿರುವ ಸ್ಥಾನಕ್ಕೆ ಸರ್ಕಾರ ಯಾರನ್ನೂ ನೇಮಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.