ADVERTISEMENT

ಸಿರುಗುಪ್ಪ: ಕಲಾವಿದರ ಬದುಕಿಗೆ ಬೆಲೆಯಿಲ್ಲ

ರಂಗ ಸುಗ್ಗಿ ಕಾರ್ಯಕ್ರಮ: ಮದಿರೆ ಮರಿಸ್ವಾಮಿ ನೋವಿನ ನುಡಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 3:47 IST
Last Updated 10 ಆಗಸ್ಟ್ 2021, 3:47 IST
ಸಿರುಗುಪ್ಪ ತಾಲ್ಲೂಕಿನ ಕೊತ್ತಲಚಿಂತ ಗ್ರಾಮದಲ್ಲಿ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ ಬಿ.ಜಿ.ದಿನ್ನಿವತಿಯಿಂದ ರಂಗ ಮಾಂತ್ರಿಕ ಮದಿರೆ ಮರಿಸ್ವಾಮಿ, ಬಯಲಾಟ ಕಲಾವಿದ ಮುದ್ದಟನೂರು ಜಿ.ವೀರನಗೌಡ ಅವರಿಗೆ ಕಾರಂತ ರತ್ನ ಪ್ರಶಸ್ತಿಯನ್ನು ಸೋಮವಾರ ಪ್ರದಾನ ಮಾಡಲಾಯಿತು
ಸಿರುಗುಪ್ಪ ತಾಲ್ಲೂಕಿನ ಕೊತ್ತಲಚಿಂತ ಗ್ರಾಮದಲ್ಲಿ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ ಬಿ.ಜಿ.ದಿನ್ನಿವತಿಯಿಂದ ರಂಗ ಮಾಂತ್ರಿಕ ಮದಿರೆ ಮರಿಸ್ವಾಮಿ, ಬಯಲಾಟ ಕಲಾವಿದ ಮುದ್ದಟನೂರು ಜಿ.ವೀರನಗೌಡ ಅವರಿಗೆ ಕಾರಂತ ರತ್ನ ಪ್ರಶಸ್ತಿಯನ್ನು ಸೋಮವಾರ ಪ್ರದಾನ ಮಾಡಲಾಯಿತು   

ಸಿರುಗುಪ್ಪ: ಕಲೆಗೆ ನಿಜಕ್ಕೂ ಬೆಲೆಯಿದೆ ಆದರೆ ಕಲಾವಿದರ ಬದುಕಿಗೆ ಎಳ್ಳಷ್ಟೂ ಬೆಲೆಯಿಲ್ಲ, ಇದ್ದಿದ್ದರೆ ಯಾವ ಕಲಾವಿದನೂ ಅನಾಥ ಶವವಾಗಿ ಬೀದಿಯಲ್ಲಿ ಸಾಯುತ್ತಿರಲಿಲ್ಲ ಎಂದು ಮದಿರೆ ಮರಿಸ್ವಾಮಿ ಹೇಳಿದರು.

ತಾಲ್ಲೂಕಿನ ಕೊತ್ತಲಚಿಂತ ಗ್ರಾಮದ ಹನುಮಂತಾವಧೂತರ ಮಠದಲ್ಲಿ ಕಾರಂತ ರಂಗಲೋಕ ಬಿ.ಜಿ.ದಿನ್ನೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಸೋಮವಾರ ನಡೆದ ರಂಗ ಸುಗ್ಗಿ ಕಾರ್ಯಕ್ರಮದಲ್ಲಿ ಕಾರಂತ ರತ್ನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ಪ್ರಜ್ಞೆಯ ಮೂಲಕ ಸಮಾಜದ ಆರೋಗ್ಯ ಉತ್ತಮವಾಗಿಸುವ ಕಲಾವಿದರ ಬಣ್ಣದ ಬದುಕು ರಂಗಾಗಲು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಅವರ ಬದುಕಿಗೆ ಬೆಂಗಾವಲಾಗುವ ಅನಿವಾರ್ಯತೆ ಇದೆ ಎಂದರು. ರಂಗಕರ್ಮಿ ಬದಿನೆಹಾಳ್ ಭೀಮಣ್ಣ ಮಾತನಾಡಿ, ಕೋವಿಡ್ ಸಂಕಷ್ಟದಿಂದಾಗಿ ಕಲೆ ಮತ್ತು ಕಲಾವಿದರ ಬದುಕು ಬರಡಾಗಿದೆ ಅವರ ಬದುಕು ಹಸನಾಗಿಸಲು ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದರು.

ADVERTISEMENT

ನಂತರ ಬಯಲಾಟ ಕಲಾವಿದ ಮುದ್ದಟನೂರು ಜಿ. ವೀರನಗೌಡ ಮತ್ತು ರಂಗ ಮಾಂತ್ರಿಕ ಮದಿರೆ ಮರಿಸ್ವಾಮಿಯವರಿಗೆ ಸಂಸ್ಥೆಯ ವತಿಯಿಂದ ‘ಕಾರಂತ ರತ್ನ-2020’ ರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಣ್ಣಾಜಿ ಕೃಷ್ಣಾರೆಡ್ಡಿ ರಚನೆ ಮತ್ತು ರಾವಿಹಾಳ್ ರಾಮಕೃಷ್ಣ ನಿರ್ದೇಶನದ ‘ಕತ್ತಲೆ ರಾಜ್ಯದ ಮೂರ್ಖರಾಜ’ ನಾಟಕ ಹಾಗೂ ಆರ್. ಭೀಮನಗೌಡ ನಿರ್ದೇಶನದ ಗೊರವರ ಕುಣಿತ ಪ್ರದರ್ಶನ ನಡೆಯಿತು.

ಪಂಪಾರೆಡ್ಡಿ ಕೊತ್ತಲಚಿಂತ, ಮಿಟ್ಟೆಸೂಗೂರು ವೆಂಕಟರೆಡ್ಡಿ, ಸತ್ಯನಾರಾಯಣ ಶೆಟ್ಟಿ, ಎಚ್.ಕೆ. ನರಸನಗೌಡ, ನಾಗನಗೌಡ, ಸತ್ಯ ನಾರಾಯಣ ರೆಡ್ಡಿ, ಸಂಸ್ಥೆಯ ಕಾರ್ಯದರ್ಶಿ ಆರ್.ಪಿ. ಮಂಜುನಾಥ್, ಆರ್. ಚನ್ನನಗೌಡ, ಪಿ.ಕೆ. ರವಿ, ಗುರುನಾಥ್, ವೆಂಕಟೇಶ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.