ADVERTISEMENT

ಕಬಿನಿ ಬಳಿ ನಿರ್ಮಿಸುತ್ತಿರುವುದು ರೆಸಾರ್ಟ್ ಅಲ್ಲ‌: ಕೆ.ಎಸ್‌.ನರಸಿಂಹಮೂರ್ತಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 20:53 IST
Last Updated 19 ನವೆಂಬರ್ 2020, 20:53 IST

ಮೈಸೂರು: ಎಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನ ಬಳಿ ನಿರ್ಮಿಸುತ್ತಿರುವುದು ‘ರೆಸಾರ್ಟ್ ಅಲ್ಲ; ಫಾರ್ಮ್‌ಹೌಸ್‌’ ಎಂದು ಬಳ್ಳಾರಿಯ ಕೆ.ಎಸ್‌.ನರಸಿಂಹಮೂರ್ತಿ ಎಂಬುವವರು ಹೇಳಿದ್ದಾರೆ.

‘ಈ ಕಟ್ಟದ ಮಾಲೀಕ ನಾನೇ ಆಗಿದ್ದು, ಇದು ಸ್ವಯಾರ್ಜಿತ ಆಸ್ತಿ. ಸ್ವಂತ ಉಪಯೋಗಕ್ಕೆ ಕಟ್ಟಿಸಿಕೊಳ್ಳುತ್ತಿದ್ದೇನೆ. ಬೇನಾಮಿ ಹೆಸರಿನಲ್ಲಿ ನಿರ್ಮಿಸಲಾಗುತ್ತಿದೆ ಎಂಬ ವಿಚಾರ ಸತ್ಯಕ್ಕೆ ದೂರವಾದದು. ಈ ಆಸ್ತಿ ಮೇಲೆ ಬೇರೆ ಯಾರ ಹಕ್ಕೂ ಇಲ್ಲ’ ಎಂದಿದ್ದಾರೆ.

‘ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 95ರ ಅನ್ವಯ ಕೃಷಿ ಜಮೀನಿನಲ್ಲಿ ಫಾರ್ಮ್‌ಹೌಸ್‌ ಕಟ್ಟಿಸಿಕೊಳ್ಳಲು ಅವಕಾಶವಿದೆ. ಅದಕ್ಕೆ ಭೂಪರಿವರ್ತನೆ ಅಥವಾ ಪರವಾನಗಿ ಬೇಕಿಲ್ಲ’ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.