ADVERTISEMENT

ಕಬಿನಿ ಬಳಿ ನಿರ್ಮಿಸುತ್ತಿರುವುದು ರೆಸಾರ್ಟ್ ಅಲ್ಲ‌: ಕೆ.ಎಸ್‌.ನರಸಿಂಹಮೂರ್ತಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 20:53 IST
Last Updated 19 ನವೆಂಬರ್ 2020, 20:53 IST

ಮೈಸೂರು: ಎಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನ ಬಳಿ ನಿರ್ಮಿಸುತ್ತಿರುವುದು ‘ರೆಸಾರ್ಟ್ ಅಲ್ಲ; ಫಾರ್ಮ್‌ಹೌಸ್‌’ ಎಂದು ಬಳ್ಳಾರಿಯ ಕೆ.ಎಸ್‌.ನರಸಿಂಹಮೂರ್ತಿ ಎಂಬುವವರು ಹೇಳಿದ್ದಾರೆ.

‘ಈ ಕಟ್ಟದ ಮಾಲೀಕ ನಾನೇ ಆಗಿದ್ದು, ಇದು ಸ್ವಯಾರ್ಜಿತ ಆಸ್ತಿ. ಸ್ವಂತ ಉಪಯೋಗಕ್ಕೆ ಕಟ್ಟಿಸಿಕೊಳ್ಳುತ್ತಿದ್ದೇನೆ. ಬೇನಾಮಿ ಹೆಸರಿನಲ್ಲಿ ನಿರ್ಮಿಸಲಾಗುತ್ತಿದೆ ಎಂಬ ವಿಚಾರ ಸತ್ಯಕ್ಕೆ ದೂರವಾದದು. ಈ ಆಸ್ತಿ ಮೇಲೆ ಬೇರೆ ಯಾರ ಹಕ್ಕೂ ಇಲ್ಲ’ ಎಂದಿದ್ದಾರೆ.

‘ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 95ರ ಅನ್ವಯ ಕೃಷಿ ಜಮೀನಿನಲ್ಲಿ ಫಾರ್ಮ್‌ಹೌಸ್‌ ಕಟ್ಟಿಸಿಕೊಳ್ಳಲು ಅವಕಾಶವಿದೆ. ಅದಕ್ಕೆ ಭೂಪರಿವರ್ತನೆ ಅಥವಾ ಪರವಾನಗಿ ಬೇಕಿಲ್ಲ’ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.