ADVERTISEMENT

ಏಳು ಮಳಿಗೆ ಮಾಲೀಕರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಮೇ 2021, 17:01 IST
Last Updated 6 ಮೇ 2021, 17:01 IST

ಹೊಸಪೇಟೆ(ವಿಜಯನಗರ): ಕೋವಿಡ್–19 ಮಾರ್ಗಸೂಚಿ ಉಲ್ಲಂಘಿಸಿದ ನಗರದ ಏಳು ವಾಣಿಜ್ಯ ಮಳಿಗೆ ಮಾಲೀಕರ ವಿರುದ್ಧ ಇಲ್ಲಿನ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಟ್ಟೆ ಹಾಗೂ ಆಭರಣ ಮಳಿಗೆ ಮಾರಾಟಕ್ಕೆ ಕೋವಿಡ್–19 ನಿಯಮಾನುಸಾರ ನಿರ್ಬಂಧವಿದ್ದರೂ ವ್ಯಾಪಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಐದು ಬಟ್ಟೆ ಅಂಗಡಿ ಹಾಗೂ ಎರಡು ಆಭರಣ ಮಳಿಗೆಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪಟ್ಟಣ ಠಾಣೆ ಸಿಪಿಐ ಎಂ.ಶ್ರೀನಿವಾಸ ರಾವ್ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT