ADVERTISEMENT

‘ಆರ್ಥಿಕ ಸಾಕ್ಷರತೆಯಿಂದ ಆರ್ಥಿಕ ಭದ್ರತೆ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 14:22 IST
Last Updated 19 ನವೆಂಬರ್ 2019, 14:22 IST
ಸಾಕ್ಷರತಾ ಕೇಂದ್ರ ಘಟಕದ ಜಿಲ್ಲಾ ಸಂಯೋಜಕ ಸಿ. ನಾಗರಾಜ ಕಾರ್ಯಕ್ರಮ ಉದ್ಘಾಟಿಸಿದರು
ಸಾಕ್ಷರತಾ ಕೇಂದ್ರ ಘಟಕದ ಜಿಲ್ಲಾ ಸಂಯೋಜಕ ಸಿ. ನಾಗರಾಜ ಕಾರ್ಯಕ್ರಮ ಉದ್ಘಾಟಿಸಿದರು   

ಹೊಸಪೇಟೆ: ‘ಆರ್ಥಿಕ ಸಾಕ್ಷರತೆಯಿಂದ ಆರ್ಥಿಕವಾಗಿ ಭದ್ರರಾಗಬಹುದು. ಅನೇಕ ಜನರಿಗೆ ಹಣವನ್ನು ಯಾವ ರೀತಿ ಬಳಸಬೇಕು ಎಂಬುದರ ಜ್ಞಾನ ಇರುವುದಿಲ್ಲ. ಹೀಗಾಗಿ ಅವರು ಅಭದ್ರತೆಯಲ್ಲಿ ಇರುತ್ತಾರೆ’ ಎಂದು ಸಾಕ್ಷರತಾ ಕೇಂದ್ರ ಘಟಕದ ಜಿಲ್ಲಾ ಸಂಯೋಜಕ ಸಿ. ನಾಗರಾಜ ತಿಳಿಸಿದರು.

ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಸಂಘಟಿತ ವಲಯದಲ್ಲಿ ದುಡಿಯುವವರಿಗೆ ಪಿಂಚಣಿ ಇರುವುದಿಲ್ಲ. ಮಕ್ಕಳ ಭವಿಷ್ಯ, ಜೀವನದ ಭದ್ರತೆಗೆ ಅವರು ಸರ್ಕಾರಿ ಬ್ಯಾಂಕುಗಳಲ್ಲಿ ಹಣ ಉಳಿತಾಯ ಮಾಡಬೇಕು’ ಎಂದು ಹೇಳಿದರು.

ADVERTISEMENT

ಉಳಿತಾಯ ಖಾತೆಯ ಬಗೆ, ಸರ್ಕಾರದ ವಿವಿಧ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವುದು, ಯಾರೆಲ್ಲ ಬ್ಯಾಂಕ್‌ ಖಾತೆ ತೆರೆಯಬಹುದು ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು.

ಮರಿಯಮ್ಮನಹಳ್ಳಿ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆ ವ್ಯವಸ್ಥಾಪಕ ರಾಘವೇಂದ್ರ, ಬ್ಯಾಂಕ್‌ ಮಿತ್ರ ಪರಮೇಶ್‌, ಡಣಾಯಕನಕೆರೆ ಗ್ರಾಮ ಪಂಚಾಯಿತಿ ಸದಸ್ಯ ಸೋಮಪ್ಪ, ಎ. ರಂಗಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.